alex Certify ಅಭಿಮಾನಿಗಳ ಕಣ್ಣಂಚನ್ನು ತೇವಗೊಳಿಸಿದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕೊನೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳ ಕಣ್ಣಂಚನ್ನು ತೇವಗೊಳಿಸಿದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕೊನೆ ವಿಡಿಯೋ

ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಸುಬ್ರಹ್ಮಣ್ಯಂ ವೈರಸ್ ವಿರುದ್ಧ ಹೋರಾಡಿ ಜಯ ಸಾಧಿಸಲು ವಿಫಲರಾದ್ರು. ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಇಡೀ ಚಿತ್ರರಂಗ, ಅಭಿಮಾನಿಗಳ ಬಳಗ ಕಂಬನಿ ಮಿಡಿಯುತ್ತಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಬಾಲಸುಬ್ರಹ್ಮಣ್ಯಂ ವಿಡಿಯೋ ಅಪ್ಲೋಡ್ ಮಾಡಿದ್ದರು. ಅದು ಅವ್ರ ಕೊನೆಯ ವಿಡಿಯೋ. ಈ ವಿಡಿಯೋದಲ್ಲಿ ಬಾಲಸುಬ್ರಹ್ಮಣ್ಯಂ, ಎರಡು ದಿನಗಳಿಂದ ಸ್ವಲ್ಪ ಸಮಸ್ಯೆಯಾಗ್ತಿದೆ. ಎದೆ ಬಿಗಿದ ಅನುಭವವಾಗ್ತಿದೆ. ಸ್ವಲ್ಪ ಶೀತ-ಜ್ವರವಿದೆ. ಮತ್ತೇನೂ ಸಮಸ್ಯೆಯಿಲ್ಲದೆ ಹೋದ್ರೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದೆ. ನನಗೆ ಕೊರೊನಾ ಪಾಸಿಟಿವ್ ಇದೆ ಎಂಬುದು ಗೊತ್ತಾಗಿದೆ ಎಂದಿದ್ದರು.

ವೈದ್ಯರು ಮಾತ್ರೆ ನೀಡಿದ್ದಾರೆ. ಮನೆಗೆ ಹೋಗುವಂತೆ ಹೇಳಿದ್ದಾರೆ. ಆದ್ರೆ ನಾನು ಮನೆಯವರಿಗೆ ತೊಂದರೆ ನೀಡಲಾರೆ. ಹಾಗಾಗಿ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದೇನೆ. ನನಗೆ ಅನೇಕರು ಕರೆ ಮಾಡ್ತಿದ್ದಾರೆ. ನಾನು ಕರೆ ಸ್ವೀಕರಿಸಲು ಆಗ್ತಿಲ್ಲ. ನಾನು ವಿಶ್ರಾಂತಿಗಾಗಿ ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ಫೋನ್ ಮಾಡಬೇಡಿ. ಇನ್ನೆರಡು ದಿನಗಳಲ್ಲಿ ಮನೆಗೆ ವಾಪಸ್ ಆಗ್ತೇನೆಂದು ಬಾಲಸುಬ್ರಹ್ಮಣ್ಯಂ ಹೇಳಿದ್ದರು. ಆದ್ರೆ ಬಾಲಸುಬ್ರಹ್ಮಣ್ಯಂ ವಾಪಸ್ ಬರಲಿಲ್ಲ.

Posted by S. P. Balasubrahmanyam on Tuesday, August 4, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...