alex Certify ಶಿವಮೊಗ್ಗ: ನಿನ್ನೆ ಮಗನಿಂದಲೇ ತಂದೆಯ ಹತ್ಯೆ, ಇವತ್ತೂ ಮಗನಿಂದಲೇ ಘೋರ ಕೃತ್ಯ -ಕುತ್ತಿಗೆ ಮೇಲೆ ಕಾಲಿಟ್ಟು ತಾಯಿಯನ್ನೇ ಕೊಂದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ: ನಿನ್ನೆ ಮಗನಿಂದಲೇ ತಂದೆಯ ಹತ್ಯೆ, ಇವತ್ತೂ ಮಗನಿಂದಲೇ ಘೋರ ಕೃತ್ಯ -ಕುತ್ತಿಗೆ ಮೇಲೆ ಕಾಲಿಟ್ಟು ತಾಯಿಯನ್ನೇ ಕೊಂದ ಪುತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಮಗನಿಂದಲೇ ತಂದೆಯ ಹತ್ಯೆ ನಡೆದ ಪ್ರಕರಣ ನಡೆದ ಬೆನ್ನಲ್ಲೇ ಇವತ್ತು ಮಗನೇ ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ ಸಮೀಪದ ಮಂಡೇನಕೊಪ್ಪದಲ್ಲಿ 55 ವರ್ಷದ ಕುಮಾರನಾಯ್ಕ್ ಅವರನ್ನು 28 ವರ್ಷದ ಅವರ ಮಧು ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಪ್ರತಿದಿನ ಕುಡಿದು ಬಂದು ತಂದೆ ಗಲಾಟೆ ಮಾಡುತ್ತಿದ್ದರಿಂದ ಜಗಳವಾಗಿ ಮಗ ತಂದೆಗೆ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡು ಕುಮಾರನಾಯ್ಕ್ ಮೃತಪಟ್ಟಿದ್ದಾನೆ.

ಇವತ್ತು ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬುಳ್ಳಾಪುರದಲ್ಲಿ 27 ವರ್ಷದ ದೇವರಾಜ್ ನಾಯ್ಕ್ ಎಂಬಾತ ಇಂತಹ ಕೃತ್ಯವೆಸಗಿದ್ದಾನೆ.

ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ದೇವರಾಜ್ ನಾಯ್ಕ ತಂದೆ, ತಾಯಿಯೊಂದಿಗೆ ಜಗಳವಾಡುತ್ತಿದ್ದ. ತಾಯಿ ವನಜಾಕ್ಷಿ ಅವರೊಂದಿಗೆ ಜಗಳವಾಡಿ ಕಪಾಳಕ್ಕೆ ಹೊಡೆದು ಕುತ್ತಿಗೆಯನ್ನು ಕಾಲಲ್ಲಿ ತುಳಿದಿದ್ದು, ವನಜಾಕ್ಷಿ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...