BREAKING: ಉಡುಪಿಯಲ್ಲಿ ನಟ ಪವನ್ ಕಲ್ಯಾಣ್ ಗೆ ‘ಅಭಿನವ ಕೃಷ್ಣದೇವರಾಯ’ ಬಿರುದು ಪ್ರದಾನ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಭಾಗವಹಿಸಿದ್ದಾರೆ.

ಅವರಿಗೆ ಅಭಿನವ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೃಷ್ಣದೇವರಾಯ ಆದರ್ಶ ರಾಜ್ಯ ನಿರ್ಮಾಣ ಮಾಡಿದ್ದರು. ಸನಾತನ ಧರ್ಮ ರಕ್ಷಣೆಗೆ ಪವನ್ ಕಲ್ಯಾಣ್ ಶ್ರಮ ಶ್ಲಾಘನೀಯ. ಹಾಗಾಗಿ ಪವನ್ ಕಲ್ಯಾಣ್ ಅವರಿಗೆ ಈ ಬಿರುದು ನೀಡುತ್ತಿದ್ದೇವೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಹೇಳಿದ್ದಾರೆ.

ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ದಾರ್ಶನಿಕ ಮಾರ್ಗದರ್ಶನದಲ್ಲಿ, ಈ ಪವಿತ್ರ ಭೂಮಿ ಒಂದು ಕೋಟಿ ಕೈಬರಹದ ಭಗವದ್ಗೀತೆ ಯೋಜನೆಯಿಂದ ಲಕ್ಷ ಕಾಂತ ಪಾರಾಯಣದವರೆಗೆ – ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವ ಐತಿಹಾಸಿಕ ಆಧ್ಯಾತ್ಮಿಕ ಚಲನೆಗಳಿಗೆ ಸಾಕ್ಷಿಯಾಗುತ್ತಿದೆ. ಗೀತೆಯ ಸಂದೇಶವು ನಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡಲಿ, ನಮ್ಮ ಸಮಾಜವನ್ನು ಬಲಪಡಿಸಲಿ ಮತ್ತು ನಮ್ಮ ರಾಷ್ಟ್ರೀಯ ಮನೋಭಾವವನ್ನು ಉನ್ನತೀಕರಿಸಲಿ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read