BREAKING : ಬೆಂಗಳೂರಲ್ಲಿ ತಡರಾತ್ರಿ ರಸ್ತೆಗುರುಳಿದ 20 ಕ್ಕೂ ವಿದ್ಯುತ್ ಕಂಬಗಳು, ತಪ್ಪಿದ ಭಾರಿ ದುರಂತ..!

ಬೆಂಗಳೂರು : ಬೆಂಗಳೂರಿನಲ್ಲಿ 20 ಕ್ಕೂ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ್ದು, ಭಾರಿ ದುರಂತವೊಂದು ತಪ್ಪಿದೆ.

ಟಿಪ್ಪರ್ ಚಾಲಕನ ಎಡವಟ್ಟಿನಿಂದ ಈ ಘಟನೆ ನಡೆದಿದೆ. ತಡರಾತ್ರಿ ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಟಿಪ್ಪರ್ ಟಾಪ್ ಗೆ ವಿದ್ಯುತ್ ಕಂಬದ ವೈರ್ ಸಿಲುಕಿದೆ. ಇದನ್ನು ಗಮನಿಸಿದ ಚಾಲಕ ಟಿಪ್ಪರ್ ಚಲಾಯಿಸಿದ್ದಾನೆ. ಪರಿಣಾಮ ಸಾಲು ಸಾಲಾಗಿ ಬೆಂಗಳೂರಿನಲ್ಲಿ 20 ಕ್ಕೂ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದೆ. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.

ಟಿಪ್ಪರ್ ಚಾಲಕ ಮಣಿ ಎಂಬಾತ ಮದ್ಯಪಾನ ಮಾಡಿ ಟಿಪ್ಪರ್ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read