alex Certify ಸಾಲದ ಹೊರೆಯಿಂದ ಹೊರಬರಲು ʼಮಂಗಳವಾರʼದಂದು ಅಕ್ಕಿ ಹಿಟ್ಟಿನಿಂದ ಈ ಪರಿಹಾರ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ಹೊರೆಯಿಂದ ಹೊರಬರಲು ʼಮಂಗಳವಾರʼದಂದು ಅಕ್ಕಿ ಹಿಟ್ಟಿನಿಂದ ಈ ಪರಿಹಾರ ಮಾಡಿ

ಮನುಷ್ಯನಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ಆತ ದುಡಿದ ಹಣ ಸಾಲದಿದ್ದಾಗ ಬೇರೆಯವರ ಬಳಿ ಸಾಲಗಳನ್ನು ಮಾಡಬೇಕಾಗುತ್ತದೆ. ಹೀಗೆ ಸಾಲದ ಮೇಲೆ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಇಂತಹ ಸಾಲದ ಸಮಸ್ಯೆಯಿಂದ ಹೊರಬರಲು ಮಂಗಳವಾರದಂದು ಈ ಚಿಕ್ಕ ಪರಿಹಾರ ಮಾಡಿ.

ಸುಬ್ರಹ್ಮಣ್ಯ ಸ್ವಾಮಿ ಮತ್ತು ಲಕ್ಷ್ಮಿನರಸಿಂಹ ಸ್ವಾಮಿ ದೇವರು ಸಾಲಗಳ ಹೊರೆಯಿಂದ ನಮ್ಮನ್ನು ಕಾಪಾಡುತ್ತಾರೆ. ಈ ದೇವರ ಪೂಜೆ ಮಾಡಿದರೆ ನಮ್ಮನ್ನು ಋಣಭಾರದಿಂದ ಮುಕ್ತವಾಗಿಸುತ್ತಾರಂತೆ. ಹಾಗಾಗಿ 3 ಮಂಗಳವಾರದಂದು ಈ ದೇವರುಗಳನ್ನು ಅಕ್ಕಿಹಿಟ್ಟನ್ನು ಬಳಸಿ ಈ ರೀತಿಯಾಗಿ ಪೂಜಿಸಬೇಕು.

ಮಂಗಳವಾರದಂದು ನಿಮ್ಮ ಮನೆಯ ಹತ್ತಿರವಿರುವ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಕ್ಕೆ ಅಕ್ಕಿಹಿಟ್ಟನ್ನು ತೆಗೆದುಕೊಂಡು ಹೋಗಿ ದೇವರಿಗೆ ಅಭಿಷೇಕ ಮಾಡಿಸಿ, ಬಳಿಕ 9 ಬತ್ತಿ, ಎಳ್ಳೆಣ್ಣೆಯನ್ನು ಹಾಕಿ ದೀಪ ಬೆಳಗಿಸಬೇಕು. 9 ಪ್ರದಕ್ಷಿಣೆ ಹಾಕಬೇಕು. ಹೀಗೆ ಮೂರು ಮಂಗಳವಾರ ಮಾಡಬೇಕು. ಅಥವಾ 3 ಮಂಗಳವಾರ ಲಕ್ಷ್ಮಿನರಸಿಂಹ ಸ್ವಾಮಿಗೆ ತುಳಸಿಹಾರವನ್ನು ಅರ್ಪಿಸಿ ಬಳಿಕ 9 ಬತ್ತಿ, ಎಳ್ಳೆಣ್ಣೆಯನ್ನು ಹಾಕಿ ದೀಪ ಬೆಳಗಿಸಬೇಕು. 9 ಪ್ರದಕ್ಷಿಣೆ ಹಾಕಬೇಕು ಇದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗಿ, ಸಾಲಬಾಧೆ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...