alex Certify ಶುಭ ಮುಹೂರ್ತದಲ್ಲಿ ಮಾಡಿ ರಾಮನ ʼಆರಾಧನೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಮುಹೂರ್ತದಲ್ಲಿ ಮಾಡಿ ರಾಮನ ʼಆರಾಧನೆʼ

ಹಿಂದೂ ಧರ್ಮದಲ್ಲಿ ರಾಮ ನವಮಿಯ ಹಬ್ಬಕ್ಕೆ ಬಹಳ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ರಾಮ ನವಮಿಯನ್ನು ಪವಿತ್ರ ಹಬ್ಬವೆಂದು ಪರಿಗಣಿಸಲಾಗಿದೆ.  ಶ್ರೀ ರಾಮನಿಗೆ ಇದನ್ನು ಅರ್ಪಿಸಲಾಗಿದೆ. ರಾಮನವಮಿ ದಿನದಂದು ಜನರು ಭಗವಾನ್ ರಾಮನನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಈ ಬಾರಿ ಏಪ್ರಿಲ್ 21ರಂದು ರಾಮನವಮಿ ಆಚರಿಸಲಾಗ್ತಿದೆ.

ನಾಡಿನೆಲ್ಲೆಡೆ ರಾಮನವಮಿ ಹಬ್ಬವನ್ನು ಭಕ್ತರು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ರಾಮನವಮಿ ಹಬ್ಬವು ಪ್ರತಿವರ್ಷ ಚೈತ್ರ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಏಪ್ರಿಲ್ 21, ಬುಧವಾರ 11:02 ರಿಂದ ಮಧ್ಯಾಹ್ನ 1:38 ರವರೆಗೆ ರಾಮನವಮಿ ಆಚರಿಸಲು ಶುಭ ಮುಹೂರ್ತವಿದೆ.

ರಾಮನವಮಿ ದಿನದಂದು ಭಗವಾನ್ ಶ್ರೀ ರಾಮನನ್ನು ಪೂಜಿಸಲಾಗುತ್ತದೆ, ರಾಮನ ವಿಗ್ರಹಕ್ಕೆ ಗಂಗಾ ನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ಅವರ ವಿಗ್ರಹವನ್ನು ತೊಟ್ಟಿಲಲ್ಲಿ ಇಟ್ಟು ಪೂಜಿಸಲಾಗುತ್ತದೆ. ಈ ದಿನ ಭಕ್ತರು ರಾಮಾಯಣವನ್ನು ಮತ್ತು ರಾಮ ರಕ್ಷೆಯನ್ನು ಪಠಿಸುತ್ತಾರೆ. ಈ ದಿನ ರಾಮ ದೇವಸ್ಥಾನದಲ್ಲಿ ಭಗವಾನ್ ರಾಮನ ಭಜನಾ ಕೀರ್ತನೆಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ವೈರಸ್ ಕಾರಣಕ್ಕೆ ಮನೆಯಲ್ಲೇ ಸರಳವಾಗಿ ಆಚರಿಸುವಂತೆ ಸಲಹೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...