alex Certify ಲಕ್ಷ್ಮಿದೇವಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿದೇವಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಬೇಕು. ವ್ಯಾಪಾರ-ವ್ಯವಹಾರದಲ್ಲಿ ಲಾಭ, ಲೇವಾದೇವಿ ವ್ಯವಹಾರದಲ್ಲಿ ಧನಲಾಭ. ಶತ್ರುಗಳಿಂದ ತೊಂದರೆ, ಹಣದ ವಿಚಾರದಲ್ಲಿ ಜಾಗ್ರತರಾಗಿರಿ. ಆರೋಗ್ಯದ ಕಡೆ ಕಾಳಜಿ ವಹಿಸಿರಿ.

ಕೆಲಸ – ಕಾರ್ಯಗಳಲ್ಲಿ ತೊಡಗಿಕೊಂಡವರಿಗೆ ಹೊಸ ಒಪ್ಪಂದ, ಅವಕಾಶಗಳು ದೊರೆಯಲಿವೆ. ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂಟಿತನ ವಿಪರೀತ ಕಾಡುತ್ತದೆ.

ಅದೃಷ್ಟ ಸಂಖ್ಯೆ:- 9

ವೃಷಭ ರಾಶಿ

ಆಕಸ್ಮಿಕ ಧನ ಲಾಭ, ನಂಬಿದ ಜನರಿಂದ ಮೋಸ, ಕಾರ್ಯನಿರ್ವಹಣೆ ಮಾಡುವ ಅಧಿಕಾರಿ ವರ್ಗದವರಿಗೆ ಅಪವಾದ. ಹಣ ಸಂಪಾದನೆಯ ಕೆಲಸಗಳು ಅನೇಕ ರೀತಿಯ ಅವಕಾಶಗಳು ಲಭ್ಯವಾಗುತ್ತದೆ.

ಅವಿವಾಹಿತರಿಗೆ ನೂತನ ಸಂಬಂಧ ಗೊತ್ತಾಗುತ್ತೆ. ಗೃಹ ನಿರ್ಮಾಣ ಕಾರ್ಯಗಳ ಪ್ರಯತ್ನ ಮಾಡುವಿರಿ.

ಅದೃಷ್ಟ ಸಂಖ್ಯೆ:- 9

ಮಿಥುನ ರಾಶಿ

ಉದ್ಯೋಗ ರಂಗದಲ್ಲಿ ಬದಲಾವಣೆ ಸಾಧ್ಯತೆ, ಹೊಸ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಕೋರ್ಟು ಕಚೇರಿ ಸಮಸ್ಯೆಗಳ ನಿವಾರಣೆ.

ನೆರೆಹೊರೆಯವರೊಡನೆ ಹೆಚ್ಚಿನ ವಿಶ್ವಾಸ ವಂಚನೆಗೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಎಲ್ಲಿ ಹೋದರೂ ಅಶಾಂತಿ, ಇಲ್ಲ ಸಲ್ಲದ ಅಪವಾದ, ದಾಯಾದಿಗಳ ಕಲಹ, ಆತ್ಮೀಯರಲ್ಲಿ ಮನಃಸ್ತಾಪ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿರಿ.

ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲಕ್ಕೆ ಉತ್ತಮ ಫ‌ಲಿತಾಂಶವು ನೆಮ್ಮದಿ. ವೃತ್ತಿರಂಗದಲ್ಲಿ ಜಾಣ್ಮೆಯಿಂದ ವರ್ತಿಸಿದಲ್ಲಿ ನೆಮ್ಮದಿ ತರಲಿದೆ.

ಅದೃಷ್ಟ ಸಂಖ್ಯೆ:- 7

ಕರ್ಕಾಟಕ ರಾಶಿ

ನಿಮ್ಮ ಕೆಲಸ ಕಾರ್ಯಗಳಲ್ಲಿ ಪದೇ ಪದೆ ವಿಘ್ನಗಳು ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು.

ಆರ್ಥಿಕವಾಗಿ ಚೇತರಿಕೆ ತೋರಿಬಂದರೂ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ.

ವ್ಯಾಪಾರ, ವಹಿವಾಟು ಸಂದರ್ಭದಲ್ಲಿ ಎಚ್ಚರವಿರಲಿ. ದುಡಿಮೆಗೆ ತಕ್ಕ ಫ‌ಲವಿದ್ದರೂ ಹಣಕಾಸು ಸಂಕಷ್ಟ, ಸಾಲ ಬಾಧೆ, ವಿಪರೀತ ಹಣ ಖರ್ಚು, ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ತೊಂದರೆಗಳು ಎದುರಾಗುವ ಸಾಧ್ಯತೆ. ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸಲಿವೆ ಎಚ್ಚರಿಕೆ ಅಗತ್ಯ.

ಅದೃಷ್ಟ ಸಂಖ್ಯೆ:- 1

ಸಿಂಹ ರಾಶಿ

ಅವಿವಾಹಿತರಿಗೆ ವಿವಾಹ ಯೋಗ, ದಾನ-ಧರ್ಮದಲ್ಲಿ ಆಸಕ್ತಿ. ದೇವತಾ ಕಾರ್ಯದಿಂದ ಸಮಾಧಾನ ತೋರಿಬರಲಿದೆ. ಕೆಲಸ–ಕಾರ್ಯಗಳಲ್ಲಿ ಬಂಧುಮಿತ್ರರ ಸಲಹೆಯಿಂದಾಗಿ ಅನುಕೂಲ. ಉಲ್ಲಾಸಮಯ ಕೌಟುಂಬಿಕ ಜೀವನ ನಡೆಸಲಿದ್ದೀರಿ.

ಸಿನಿಮಾ ರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ ಕಂಡು ಬರುವುದು. ವ್ಯಾಪಾರ, ವ್ಯವಹಾರದಲ್ಲಿ ಒಳ್ಳೆಯ ಯಶಸ್ಸಿದೆ. ದೂರದ ಪ್ರಯಾಣದಲ್ಲಿ ಕಾರ್ಯಸಿದ್ದಿ, ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ.

ಅದೃಷ್ಟ ಸಂಖ್ಯೆ:- 5

ಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ʼಆರ್ಥಿಕʼ ಮುಗ್ಗಟ್ಟು ನಿಶ್ಚಿತ

ಕನ್ಯಾ ರಾಶಿ

ಸ್ತ್ರೀಯರಿಗೆ ವಿವಾಹ ಸಂಬಂಧ ಕೂಡಿಬರಲಿದೆ. ಎಂಜಿನಿಯರ್ ಮುಂತಾದ ತಾಂತ್ರಿಕ ಪರಿಣಿತರಿಗೆ ಯಶಸ್ಸಿನ ಹಾದಿ ಲಭಿಸಲಿದೆ.
ರಾಜಕೀಯ ವ್ಯವಹಾರದಲ್ಲಿ ಹೆಚ್ಚಿನ ಅನುಕೂಲ. ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ.

ಆರ್ಥಿಕವಾಗಿ ವ್ಯಾಪಾರ, ವಹಿವಾಟಿನಲ್ಲಿ ನಷ್ಟವಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ಕಲಾವಿದರಿಗೆ ಪುರಸ್ಕಾರ ದೊರೆಯುವುದು. ಕಲಾರಂಗದಲ್ಲಿ ಯಶಸ್ಸು. ಅವಿವಾಹಿತರಿಗೆ ಮದುವೆಗೆ ಪ್ರಯತ್ನಿಸಬಹುದು. ಮನರಂಜನೆ ಸಲುವಾಗಿ ಖರ್ಚು ಮಾಡಲಿದ್ದೀರಿ. ಸುಬ್ರಹ್ಮಣ್ಯ ಆರಾಧನೆ ಶ್ರೇಯಸ್ಕರ.

ಅದೃಷ್ಟ ಸಂಖ್ಯೆ:- 3

ತುಲಾ ರಾಶಿ

ಕೆಲಸದ ಸಲುವಾಗಿ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಈ ದಿನದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರದಲ್ಲಿಯೂ ಉದ್ರೇಕ, ಕೋಪತಾಪ ಉಂಟು ಮಾಡಲಿದೆ. ಶಿವನ ಆರಾಧನೆ ಮಾಡಿ.

ಅರ್ಧಕ್ಕೆ ನಿಂತಿರುವ ಅಧ್ಯಯನವನ್ನು ಮುಂದುವರಿಸಲಿದ್ದೀರಿ. ಹಿರಿಯರೊಬ್ಬರ ಆಗಮನದ ಜೊತೆ ವಿವಾಹ ವಿಷಯ ಪ್ರಸ್ತಾಪವಾಗಲಿದೆ.

ಅದೃಷ್ಟ ಸಂಖ್ಯೆ:- 2

ವೃಶ್ಚಿಕ ರಾಶಿ

ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನ. ಸ್ಥಿರಾಸ್ತಿ ಖರೀದಿ ಮಾಡುವ ಬಗ್ಗೆ ಚಿಂತಿಸುವಿರಿ. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ,

ಸಹೋದ್ಯೋಗಿಗಳಿಂದ ಮತ್ತು ಆತ್ಮೀಯರಿಂದ ಸೂಕ್ತ ಸಲಹೆ ಆರೋಗ್ಯ ಉತ್ತಮಗೊಳ್ಳುವುದು. ವಾಹನ ಮಾರಾಟಗಾರರಿಗೆ ಅಧಿಕ ಲಾಭ. ವಸ್ತ್ರ, ವ್ಯಾಪಾರಿಗಳಿಗೆ ವಿಶೇಷ ಲಾಭ. ಶಿವನ ಆರಾಧನೆಯಿಂದ ಉತ್ತಮ ಫಲ.

ಅದೃಷ್ಟ ಸಂಖ್ಯೆ:- 3

ಧನಸ್ಸು ರಾಶಿ

ಈ ದಿನ ಕೋರ್ಟು, ಕಚೇರಿ ಸಂಬಂಧದ ಕಲಹಗಳು ರಜದ ಕಾರಣ ಮುಂದಕ್ಕೆ ಹೋಗುವುದು. ಕೃಷಿಯಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಬ್ಯಾಂಕ್ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಮಿತ್ರರ ಆಗಮನ ಸಾಧ್ಯತೆ. ದೇವಿ ಆರಾಧನೆ ಮಾಡಿ.

ಕೆಲಸದಲ್ಲಿ ಒತ್ತಡಗಳು ಕಂಡುಬರುವುದು. ಆರ್ಥಿಕ ಮಿತವ್ಯಯವನ್ನು ಮಾಡುವುದು ಉತ್ತಮ. ಅನಿರೀಕ್ಷಿತ ಪ್ರಯಾಣ ಎದುರಾಗುವ ಸಾಧ್ಯತೆ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ. ವಿಷ್ಣುವಿನ ಆರಾಧನೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಅತಿಯಾದ ಶ್ರಮದಿಂದ ಉತ್ತಮ ಫಲ ಪ್ರಾಪ್ತಿ. ಆರೋಗ್ಯದಲ್ಲಿ ವ್ಯತ್ಯಯ.

ಅದೃಷ್ಟ ಸಂಖ್ಯೆ:- 4

ಮಕರ ರಾಶಿ

ಹಿರಿಯರ ಅನುಗ್ರಹದಿಂದ ಕಾರ್ಯಗಳಲ್ಲಿ ಯಶಸ್ಸು. ಗುರುವಿನ ಆರಾಧನೆ ಮಾಡಿ. ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ. ಆರ್ಥಿಕವಾಗಿ ಉತ್ತಮ ಫಲ ಪ್ರಾಪ್ತಿ. ಭೂಮಿಯಿಂದ ಅಧಿಕ ಲಾಭ ನಿರೀಕ್ಷೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಉದ್ಯೋಗರಂಗದಲ್ಲಿ ಉತ್ತಮ ಸಾಧನೆಗಳು ಸಾಧ್ಯತೆ. ಆರೋಗ್ಯದಲ್ಲಿ ಉತ್ತಮ ಫಲ ನಿರೀಕ್ಷೆ.

ಅದೃಷ್ಟ ಸಂಖ್ಯೆ:- 9

ಕುಂಭ ರಾಶಿ

ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಹಿನ್ನಡೆ ತೋರಿ ಬರುವುದು. ಗೃಹ ನಿರ್ಮಾಣದಂತಹ ಕಾರ್ಯಗಳಿಗೆ ದುಡುಕದಿರಿ. ಹಿರಿಯರ ಆರೋಗ್ಯದ ಕಾಳಜಿ ಅಗತ್ಯ. ಕಮಿಷನ್ ಏಜೆಂಟರುಗಳಿಗೆ ಹೆಚ್ಚಿನ ಆದಾಯ.

ಸರ್ಕಾರಿ ಉದ್ಯೋಗಿಗಳಿಗೆ ನೆಮ್ಮದಿ. ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಮಕ್ಕಳೊಂದಿಗೆ ಸಂಜೆ ಹಿತವಾದ ಸುತ್ತಾಟ ನೆಮ್ಮದಿ ತರಲಿದೆ. ಶಿವನ ಆರಾಧನೆ ಮಾಡಿ.

ಅದೃಷ್ಟ ಸಂಖ್ಯೆ:- 6

ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಸೋಮವಾರದಂದು ಮಾಡಿ ಈ ಪರಿಹಾರ

ಮೀನ ರಾಶಿ

ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ. ಮೇಲಧಿಕಾರಿಗಳ ಜತೆಗೆ ಅಭಿಪ್ರಾಯ ಕಾಣಿಸಿಕೊಳ್ಳಬಹುದು.

ಸುಬ್ರಹ್ಮಣ್ಯನ ಆರಾಧನೆ ಮಾಡಿ. ರಾಜಕೀಯ ವಿಷಯಗಳಲ್ಲಿ ಅತಿಯಾದ ಆಸಕ್ತಿ. ವ್ಯಾಪಾರಿಗಳಿಗೆ ಅಧಿಕ ಲಾಭ. ಸಾಮಾಜಿಕ ಕೆಲಸಗಳಲ್ಲಿ ತೊಡಗುವುದರಿಂದ ಅನುಕೂಲ. ವಿಷ್ಣುವಿನ ಆರಾಧನೆ ಒಳ್ಳೆಯದು.

ಕೆಲವು ಮಹತ್ತರ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರುವುದು. ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ.

ಅದೃಷ್ಟ ಸಂಖ್ಯೆ:- 5

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...