alex Certify ʼಯುಗಾದಿʼ ಅಮಾವಾಸ್ಯೆಯ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯುಗಾದಿʼ ಅಮಾವಾಸ್ಯೆಯ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಲವಲವಿಕೆ, ಉತ್ಸಾಹಗಳಿಗೆ ಹೆಚ್ಚಿನ ಆತ್ಮವಿಶ್ವಾಸ. ಮನೆ ಕಟ್ಟುವ ಭಾಗ್ಯ ಇದ್ದರೂ ಕುಟುಂಬದಲ್ಲಿ ಬೆಂಬಲತೆ ಸಿಗುವುದಿಲ್ಲ. ಆಸ್ತಿ, ಫ್ಲ್ಯಾಟ್,‌ ನಿವೇಶನಗಳಿಗೆ ಧನ ವ್ಯಯವಾದೀತು. ವ್ಯಾಪಾರಿ ವರ್ಗ, ವ್ಯವಹಾರಸ್ಥರಿಗೆ ಹೂಡಿಕೆ ಹಾಗೂ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಕಾಲ ಈಗ ಪಕ್ವವಾಗಿದೆ.

ಪ್ರೇಮ ವಿಷಯದಲ್ಲಿ ಮನಸ್ತಾಪ. ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದ ಕೋರ್ಟು ವ್ಯವಹಾರಗಳು ಕೂಡ ಪರಿಹಾರ ಪಡೆಯಲಿವೆ. ಓದುವ ಮಕ್ಕಳಿಗೆ ಉತ್ತಮ ಫ‌ಲಿತಾಂಶವಿದೆ.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಷಭ ರಾಶಿ

ಸಾಮಾಜಿಕ ಸ್ಥರದಲ್ಲಿ ವರ್ಚಸ್ಸು ತರಲಿದೆ. ಬಿಸಿನೆಸ್ ನಲ್ಲಿ ಸಮ ವ್ಯಕ್ತಿಗಳಿಂದ ಮೋಸವಾಗುತ್ತದೆ. ತಾಂತ್ರಿಕ ಬುದ್ಧಿವಂತಿಕೆ ನಿಮಗೆ ಸಹಾಯ ಮಾಡುತ್ತದೆ.  ಗುರು – ಹಿರಿಯರಿಂದ ಅನಿರೀಕ್ಷಿತ ಸಿಹಿಸುದ್ದಿ ನಿಮಗಿರುತ್ತದೆ.

ಶತ್ರುಗಳ  ಪ್ರಭಾವ ಹಂತಹಂತವಾಗಿ ಆತ್ಮವಿಶ್ವಾಸವನ್ನು ವರ್ಧಿಸಿಕೊಳ್ಳಿ. ಬಂದ ಅವಕಾಶಗಳನ್ನು ನಿರಾಕರಿಸದೆ ನಿಭಾಯಿಸಲು ಮುಂದಾದರೆ ಯಶಸ್ಸು ನಿಮಗಿದೆ. ವಿದ್ಯಾರ್ಥಿಗಳಿಗೆ ಓದುವ ಚಡಪಡಿಕೆ ಹೆಚ್ಚಿಸಲಿದೆ. ರಾಜಕೀಯ ಕ್ಷೇತ್ರದವರಿಗಾದರೆ ಹೆಚ್ಚಿನ ಸ್ಥಾನಮಾನಗಳಿಗೆ ಅವಕಾಶವಿರುತ್ತದೆ.

ಕೃಷಿಕರಾಗಿದ್ದಲ್ಲಿ ಗದ್ದೆ, ಹೊಲಗಳೆಲ್ಲ ಧಾನ್ಯದ ಕಣಜಗಳಾಗಲು ಕಾಲ ಉತ್ತಮವಾಗಿದೆ. ಮಿಲಿಟರಿ, ನ್ಯಾಯವಾದಿಗಳು, ಪೊಲೀಸ್‌ ಇಲಾಖೆಯವರಿಗೆ ಹೆಚ್ಚಿನ ಯಶಸ್ಸಿನ ಕಾಲ.

ಅದೃಷ್ಟ ಸಂಖ್ಯೆ:- 6

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಿಥುನ ರಾಶಿ

ಹಿಡಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ ತೋರಿಬರುತ್ತದೆ. ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾದ ಶಕ್ತಿ ಒದಗಿ ಬರಲಿದೆ. ವೈದ್ಯಕೀಯ ಜಾಹೀರಾತು ಉದ್ಯಮ, ಮಾಡೆಲಿಂಗ್‌ ಮುಂತಾದ ವಿಚಾರಗಳಲ್ಲಿ ಹೆಚ್ಚಿನ ಆದಾಯ ತೋರಿ ಬಂದೀತು. ಅಧ್ಯಾತ್ಮಿಕ ವಿಷಯದ ವ್ಯಕ್ತಿತ್ವದಲ್ಲಿ ಆಕರ್ಷಣೆ ಉಂಟಾಗಲಿದೆ.

ಸಾಗರೋತ್ತರ ವ್ಯವಹಾರಗಳು ಫ‌ಲಿಸಲಿವೆ. ವೇಗ ಹಾಗೂ ಚಾಲನೆಯಲ್ಲಿ ಗಮನ ಹರಿಸಿರಿ. ಮಕ್ಕಳ ಚಟುವಟಿಕೆಗಳಿಗೆ ಉತ್ತೇಜನ ನೀಡಿರಿ ಇದು ಸಂತಸ ತರಲಿದೆ. ಆಂಜನೇಯಸ್ವಾಮಿ ದೇವರಿಗೆ ಹೋಗಿ ಪೂಜೆ ಮಾಡಬೇಕು.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಕರ್ಕಾಟಕ ರಾಶಿ

ನಡೆಯುವ ವ್ಯಕ್ತಿಯು ಎಡವುವಂತೆ ಮಾಡುವುದೇ ಶನಿ ಕಾಡಾಟದ ಕುರುಹು ಆಗಿರುತ್ತದೆ. ಆದರೆ ಅದರಿಂದ ವಿಚಲಿತರಾಗದೆ ಮುಂದೆ ಹೆಜ್ಜೆ ಹಾಕಿರಿ. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸಿರಿ.

ಈ ದಿನ ನಿಮ್ಮ ಪಾಲಿನ ಕರ್ತವ್ಯವನ್ನು ಮಾಡಬೇಕು. ಆದರೆ ಆ ಬಗ್ಗೆ ಪ್ರತಿಫಲವನ್ನು ಅಪೇಕ್ಷಿಸುವಂತಿಲ್ಲ. ಆದಾಗ್ಯೂ ಕೊನೆಗೆ ನಿಮಗೆ ಸಲ್ಲಬೇಕಾದ ಎಲ್ಲ ಸವಲತ್ತುಗಳು ನಿಧಾನ ರೀತಿಯಾಗಿ ನಿಮ್ಮನ್ನು ಸೇರುವುದು.

ಕುಟುಂಬದ ಹೊಣೆಗಾರಿಕೆ ಹೆತ್ತವರಿಗೆ ಕುಟುಂಬದವರಿಂದ ತೊಂದರೆ ಆಗಬಹುದು. ಭಾವನಾತ್ಮಕ ಒತ್ತಡಗಳಿಗೆ ಸಿಲುಕದಿರಿ. ಪ್ರಯತ್ನಶೀಲರಿಗೆ ಜಯವು ದೊರೆಯುವುದು.

ಅದೃಷ್ಟ ಸಂಖ್ಯೆ:-2 

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಸಿಂಹ ರಾಶಿ

ಗುರುವಿನ ಕೃಪೆಗಾಗಿ ಪ್ರಾರ್ಥನೆ ಮಾಡಿರಿ. ನೀವು ಈ ದಿನ ಗಾಂಭೀರ್ಯದಿಂದ ಇದ್ದರೆ ಸಾಕು ನಿಮ್ಮ ಕೆಲಸ ಕಾರ್ಯಗಳು ಸಂಪೂರ್ಣವಾಗುತ್ತದೆ. ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಇತರರು ನಿಮ್ಮ ಮುಂದೆ ತಮ್ಮ ಅಹಂಕಾರವನ್ನು ತೋರುತ್ತಾರೆ.

ಅಂದುಕೊಂಡಿದ್ದಕ್ಕಿಂತ ಮದುವೆ ಕಾರ್ಯಗಳು ಮುಂದೂಡಲ್ಪಡುತ್ತದೆ. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿರಿ. ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಮನೆ ದೇವರನ್ನು ನೆನೆಯಬೇಕು ಸಾಧ್ಯತೆ ಇದ್ದರೆ ದೇವಸ್ಥಾನಕ್ಕೆ ಭೇಟಿ ನೀಡಿ.

ಅದೃಷ್ಟ ಸಂಖ್ಯೆ:- 1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಕನ್ಯಾ ರಾಶಿ

ಅನ್ಯರೂ ಕೂಡಾ ನಿಮ್ಮ ಮದುವೆಯ  ವಿಚಾರದಲ್ಲಿ ಮೂಗು ತೂರಿಸುವುದನ್ನು ತಡೆಯಿರಿ. ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ʼಗುರಭ್ಯೋ ನಮಃʼ ಎಂದು ಪ್ರಾರ್ಥಿಸಿ.

ಹತ್ತಿರದವರಿಂದಲೇ ಹೊಸ ಸಮಸ್ಯೆ ಎದುರಾಗುವ ಸಾಧ್ಯತೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಹಣಕಾಸಿನಲ್ಲಿ ಏರುಪೇರು ಉಂಟಾಗುತ್ತದೆ.  ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ತುಲಾ ರಾಶಿ

ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಹಣಕಾಸು ಉತ್ತಮವಾಗಿರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಈ ದಿನ ಶುಭ ಸಮಾಚಾರ ಬರುವುದು. ಕೆಲವರಿಗೆ ಮದುವೆಯೂ ನಿಶ್ಚಯವಾಗುವ ಸಂದರ್ಭವಿರುತ್ತದೆ.

ಬದುಕಿನ ಬಹುಮುಖ್ಯ ನಿರ್ಣಯವೊಂದನ್ನು ಇಂದು ನೀವು ಕೈಕೊಳ್ಳಬೇಕಾಗುವುದು. ಸ್ಪಷ್ಟ ನಡೆಯ ಸ್ವಭಾವವುಳ್ಳ ನೀವು ಅದನ್ನು ಇಂದು ಜಾರಿಗೆ ತರುವಿರಿ.

ಕೆಲಸದ ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಶ್ರೀ ಲಕ್ಷ್ಮೀ ನಾರಾಯಣ  ಸ್ವಾಮಿ ಆರಾಧನೆ ಮಾಡಿ.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಶ್ಚಿಕ ರಾಶಿ

ಉದ್ಯಮಿಗಳಿಗೆ ಶಾಕಿಂಗ್ ವಾರ್ತೆ ಕೇಳಿ ಬರುತ್ತದೆ. ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಬರುತ್ತಿದ್ದರೆ ಅದಕ್ಕಾಗಿ ಹೆಚ್ಚು ಚಿಂತಿಸಬೇಕಿಲ್ಲ. ಸಾಮಾಜಿಕವಾಗಿ ಗುರು, ಧಾರ್ಮಿಕ ವರಿಷ್ಠರ ಭೇಟಿಯ ಅವಕಾಶವಿರುತ್ತದೆ. ಆರ್ಥಿಕವಾಗಿ ಸಮಸ್ಯೆಗಳ ಯಶಸ್ವೀ ಕಾರ್ಯತಂತ್ರಗಳ ರೂಪಣೆ ಸಫ‌ಲತೆ ತಂದುಕೊಡಲಿದೆ.

ವಾಹನ, ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕ ರೂಪದಲ್ಲಿ ತೋರಿಬಂದಾವು. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನಗೊಳ್ಳಲಿರುವ ಸೂಚನೆ ಕಂಡುಬರುತ್ತದೆ. ಹೆಚ್ಚಿನ ಕೆಲಸ ಕಾರ್ಯಗಳು ಆಯಾಸ ಆಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಧನಸ್ಸು ರಾಶಿ

ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದು ನೋಡುವುದು ಉತ್ತಮ. ಸಾಂಸಾರಿಕವಾಗಿ ಚಿಕ್ಕ – ಪುಟ್ಟ ಸಮಸ್ಯೆಗಳಿದ್ದರೂ ಹೊಂದಾಣಿಕೆಯಿಂದ ಮುಂದುವರಿದಲ್ಲಿ ಉತ್ತಮ.

ಕುಟುಂಬ ವರ್ಗದ ಶುಭಕಾರ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಸಂತಸ ತರಲಿವೆ. ಬಂಧು, ಕುಟುಂಬಿಕರ ಮಿಲನದ ಅವಕಾಶದಿಂದ ಇಚ್ಛಿತ ಕೆಲಸ ಕಾರ್ಯಗಳು ನಡೆಯಲಿವೆ. ವಾಣಿಜ್ಯ ವಿತ್ತ ಖಾತೆಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಪ್ರಗತಿ ತೋರಿಬರುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯವಾದೀತು.
 
ಅದೃಷ್ಟ ಸಂಖ್ಯೆ:- 7

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಕರ ರಾಶಿ

ಕೀಳರಿಮೆ ದೌರ್ಬಲ್ಯಗಳಿಂದ ಚೇತರಿಸಿಕೊಳ್ಳುವ ಶುಭ ಸೂಚನೆ ಕಂಡೀತು. ವಾಹನ, ಭೂ ಖರೀದಿ, ಮನೆ ನಿರ್ಮಾಣ ಕಾರ್ಯ ಹಾಗೂ ಶುಭಮಂಗಳ ಕಾರ್ಯಗಳಿವೆ.

ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಯಾವುದಕ್ಕೂ ಎಚ್ಚರದ ನಡೆಯಾಗಿರಲಿ. ಯಾರಿಗೂ ಸಾಲ ನೀಡದಿರಿ. ಹೊಟೇಲ್‌ ಉದ್ಯಮದವರಿಗೆ ಕೆಲಸಗಾರರ ಕೊರತೆಯಿಂದ ಕಿರಿಕಿರಿ ತಂದೀತು. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ ತಂದೀತು.

ವಿವಾಹಾಪೇಕ್ಷಿಗಳಿಗೆ ಗುರುಬಲದಿಂದ ಕಂಕಣ ಭಾಗ್ಯದ ಯೋಗ ಕೂಡಿ ಬರಲಿದೆ. ಮರಳು, ಸಿಮೆಂಟ್‌, ಇಟ್ಟಿಗೆ, ಕಬ್ಬಿಣ, ಎಲೆಕ್ಟ್ರಿಕಲ್‌, ಗೂಡ್ಸ್‌ ವ್ಯಾಪಾರಿ ವರ್ಗದವರಿಗೆ ಲಾಭಾಂಶ ಹೆಚ್ಚಲಿದೆ.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮನೆಯ ʼಮುಖ್ಯದ್ವಾರʼದ ಬಣ್ಣ ಕಪ್ಪಾಗಿದ್ರೆ ಕಾಡುತ್ತೆ ಈ ಸಮಸ್ಯೆ

ಕುಂಭ ರಾಶಿ

ವಿದ್ಯಾರ್ಥಿಗಳಿಗೆ ವಿದ್ಯಾಬಲ ನೆರವು ನೀಡಲಿದೆ.  ತಾಳ್ಮೆಯಿಂದ ಮುಂದಾಗಿ. ಯೋಗ್ಯ ವಧು-ವರರಿಗೆ ನಿಶ್ಚಿತಾರ್ಥವಾಗುವ ಸಿಹಿ ಸುದ್ದಿ ಇದೆ. ಅಪ್ರತ್ಯಕ್ಷವಾದ ಲಾಭವೊಂದು ಸಾಧ್ಯವಾಗುವ ಹಾಗೆ ಶನೈಶ್ಚರನ ಅಭಯವಿದೆ.

ಉತ್ತಮವಾದ ಆರೋಗ್ಯಕ್ಕೆ ತಮ್ಮ ಅಭಿವೃದ್ಧಿಗೆ ಅವಕಾಶಗಳು ಒದಗಿ ಬಂದಾವು. ಮತ್ಸ್ಯೋದ್ಯಮಿಗಳಿಗೆ, ಕೋರ್ಟು ವಾಣಿಜ್ಯ ಇರುವವರಿಗೆ ತುಸು ಚೇತರಿಕೆ ಹರುಷ ತಂದೀತು. ಬೇಗುದಿಯ ತಾಪಕ್ಕೆ ಕಾರಣವಾದೀತು. ಕೆಲಸದ ಮಹಿಳೆಯರಿಗೆ ಪದೋನ್ನತಿ ಇದೆ.

ವಿದ್ಯಾರ್ಥಿಗಳಿಗೆ ಹಿರಿಯರೊಬ್ಬರು ಶಿಕ್ಷಣದ ವಿಷಯದಲ್ಲಿ ಸಾತ್ವಿಕ ಬೆಂಬಲ ನೀಡಬಲ್ಲರು. ಅಭ್ಯಾಸದಲ್ಲಿ ಏಕಾಗ್ರತೆ ಇರಲೇಬೇಕು.

ಅದೃಷ್ಟ ಸಂಖ್ಯೆ:-5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮೀನ ರಾಶಿ

ಗುರು ಅಪರಿಮಿತ ಬಲದೊಂದಿಗೆ ಅನೇಕ ರೀತಿಯ ಅಭಿವೃದ್ಧಿಗೆ ಕಾರಣನಾದಾನು. ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ. ಮರಮಟ್ಟು, ಹೊಟೇಲ್‌ ವ್ಯಾಪಾರೋದ್ಯಮದಿಂದ ಅಧಿಕ ಲಾಭಾಂಶವಿದೆ. ತಾರುಣ್ಯದ ಮಂದಿಗೆ ಉತ್ತಮ ಬಾಳ ಸಂಗಾತಿ ಸಿಗಲಿದ್ದಾಳೆ. ವಿಶೇಷವಾಗಿ ಜೀವನದ ಹಲವಾರು ಕನಸುಗಳನ್ನು ಈಡೇರಿಸಿಕೊಳ್ಳಲು ಸೂಕ್ತ ಕಾಲ.

ಪಾಲುದಾರಿಕೆ ವಿಚಾರದಲ್ಲಿ ಕೊಂಚ ಬಿಗಿ ಉಸ್ತುವಾರಿ ಇರಲಿ. ಬಾಳ ಸಂಗಾತಿಯ ಹುಡುಕಾಟದ ಬಗ್ಗೆ ಕಿರಿಕಿರಿಯಾದೀತು. ವಾಣಿಜ್ಯೋದ್ಯಮಗಳಿಗೆ, ವಣಿಕರಿಗೆ, ಶಿಕ್ಷಣ ತಜ್ಞರಿಗೆ ಇದು ಉತ್ತಮ ಕಾಲವಾಗಿದೆ. ಸರಕಾರಿ ಕಛೇರಿಗಳಲ್ಲಿನ ಕೆಲಸಗಾರರಿಗೆ ಹಿನ್ನಡೆ ಉಂಟು.

ಅದೃಷ್ಟ ಸಂಖ್ಯೆ:-1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th, ಕ್ರಾಸ್ ಮಹಾಗಣಪತಿ ದೇವಸ್ಥಾನದ ಹತ್ತಿರ, ಸಂಪಿಗೆ ರಸ್ತೆ,

ಮಲ್ಲೇಶ್ವರಂ, ಬೆಂಗಳೂರು 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...