alex Certify BIG NEWS: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಸಾವು ಪ್ರಕರಣ; ಚಂದ್ರಶೇಖರ್ ಕಾರಿನಲ್ಲಿದ್ರಾ ಮತ್ತೊಬ್ಬ ವ್ಯಕ್ತಿ ? ಪ್ರಕರಣದ ಸುತ್ತ ಅನುಮಾನದ ಹುತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಸಾವು ಪ್ರಕರಣ; ಚಂದ್ರಶೇಖರ್ ಕಾರಿನಲ್ಲಿದ್ರಾ ಮತ್ತೊಬ್ಬ ವ್ಯಕ್ತಿ ? ಪ್ರಕರಣದ ಸುತ್ತ ಅನುಮಾನದ ಹುತ್ತ

ದಾವಣಗೆರೆ; ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ಬಳಿ ಪತ್ತೆಯಾಗಿರುವ ಸಿಸಿ ಟಿವಿ ದೃಶ್ಯ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಅ.30ರಂದು ರಾತ್ರಿ ಚಂದ್ರಶೇಖರ್ ಅವರ ಕಾರು ನ್ಯಾಮತಿ ಬಳಿ ದ್ವಿಪಥ ಹೆದ್ದಾರಿಯಲ್ಲಿ ತೆರಳಿದ್ದು, ಈ ವೇಳೆ ಕಾರಿನಲ್ಲಿ ಇಬ್ಬರು ಇರುವ ಬಗ್ಗೆ ಸಿಸಿ ಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಕಾರಿನಲ್ಲಿ ಚಂದ್ರಶೇಖರ್ ಅವರ ಜೊತೆ ಇದ್ದ ಇನ್ನೊಬ್ಬ ವ್ಯಕ್ತಿ ಯಾರು? ಅವರು ಏನಾದರು ಎಂಬುದೇ? ಸಧ್ಯಕ್ಕಿರುವ ಪ್ರಶ್ನೆ.

ಅಲ್ಲದೇ ಚಂದ್ರಶೇಖರ್ ಅವರದ್ದು ಕೊಲೆಯೋ ಅಥವಾ ಅಪಘಾತದಿಂದ ಸಾವೋ ಎಂಬುದೂ ಇನ್ನಷ್ಟೇ ತಿಳಿಯಬೇಕಿದೆ. ಚಂದ್ರಶೇಖರ್ ಅವರ ಕಾರು ಹೊನ್ನಾಳಿ ಬಳಿಯ ಕಡದಕಟ್ಟೆಯಲ್ಲಿ ತುಂಗಾ ಮುಖ್ಯ ಕಾಲುವೆಯಲ್ಲಿ ಪತ್ತೆಯಾಗಿದ್ದು, ಕಾರಿನ ಹಿಂಭಾಗದಲ್ಲಿ ಚಂದ್ರಶೇಖರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೇ ಕಾರಿನ ಮುಂದಿನ ಗಾಜು ಒಳಭಾಗದಿಂದ ಒಡೆದಿರುವ ಕುರುಹು ಇದ್ದು, ಕಾರಿನಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದರೇ ? ಕಾರಿನ ಒಳಭಾಗದಿಂದ ಗ್ಲಾಸ್ ಒಡೆದು ಓಪನ್ ಆಗಲು ಕಾರಣ ವೇನು? ಒಂದು ವೇಳೆ ಚಂದ್ರಶೇಖರ್ ಅವರೇ ಕಾರು ಚಲಾಯಿಸುತ್ತಿದ್ದರೆ ಸೀಟ್ ಬೆಲ್ಟ್ ಧರಿಸಿರಲಿಲ್ಲವೇ? ಅವರ ಮೃತದೇಹ ಕಾರಿನ ಹಿಂದಿನ ಸೀಟ್ ನಲ್ಲಿ ಪತ್ತೆಯಾಗಲು ಕಾರಣವೇನು? ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಒಟ್ಟಾರೆ ಪ್ರಕರಣದ ಬಗ್ಗೆ ಹಲವು ಸಂಶಯ ವ್ಯಕ್ತವಾಗಿದ್ದು ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...