alex Certify ಕೊರೊನಾ ಸಂಕಷ್ಟದ ಮಧ್ಯೆಯೂ ಸಡಗರ ಸಂಭ್ರಮದ ʼಆಯುಧ ಪೂಜೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ಮಧ್ಯೆಯೂ ಸಡಗರ ಸಂಭ್ರಮದ ʼಆಯುಧ ಪೂಜೆʼ

ಮಹಾಮಾರಿ ಕೊರೊನಾ ಜನ ಜೀವನವನ್ನು ಕಂಗೆಡಿಸಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ನಾಡಹಬ್ಬ ದಸರಾದಂದು ಜನ ಇಂದು ಸಂಭ್ರಮದಿಂದ ಆಯುಧ, ವಾಹನ, ಸಲಕರಣೆಗಳಿಗೆ ಪೂಜೆ ಮಾಡಿದ್ದಾರೆ.

ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವಿದ್ದು, ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ಅಲಂಕಾರ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ತಮ್ಮ ಎತ್ತು, ಗಾಡಿ, ಬೇಸಾಯದ ಪರಿಕರಗಳನ್ನು ಸ್ವಚ್ಛಗೊಳಿಸಿ ಪೂಜೆ ನೆರವೇರಿಸುತ್ತಿದ್ದಾರೆ.

ಗ್ಯಾರೇಜ್, ವರ್ಕ್ ಶಾಪ್ ಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ವಾಹನಗಳನ್ನು ಹೂವುಗಳಿಂದ ಸಿಂಗರಿಸಿ, ಬಾಳೆಕಂದು, ಬಲೂನ್ ಕಟ್ಟಿ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ. ವಿವಿಧ ಕೆಲಸಗಳನ್ನು ಮಾಡುವವರು ತಮ್ಮ ಕೆಲಸಕ್ಕೆ ಬಳಸುವ ಸಲಕರಣೆ, ವಾಹನ, ಆಯುಧ, ಎಲೆಕ್ಟ್ರಾನಿಕ್ಸ್ ಸಾಮಗ್ರಿ ಮೊದಲಾದವುಗಳನ್ನು ಇಟ್ಟು ಪೂಜಿಸಲು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...