alex Certify BREAKING: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಪರಮೇಶ್ವರ್; ಪರಿಶೀಲನೆ ನಡೆಸಿ ಮುಂದೆ ಸಾಗಿದ ಕೂಡಲೇ ಕುಸಿದು ಬಿದ್ದ ಸೇತುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಪರಮೇಶ್ವರ್; ಪರಿಶೀಲನೆ ನಡೆಸಿ ಮುಂದೆ ಸಾಗಿದ ಕೂಡಲೇ ಕುಸಿದು ಬಿದ್ದ ಸೇತುವೆ

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ನೀಡಿ ತೆರಳಿದ 5 ನಿಮಿಷದಲ್ಲಿ ತೀತಾ ಸೇತುವೆ ಕುಸಿದು ಬಿದ್ದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೊರಟಗೆರೆ ತಾಲೂಕಿನ ತೀತಾ – ಗೊರವನಹಳ್ಳಿ ಸೇತುವೆ ಕುಸಿತವಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮುಂಜಾನೆ ಸೇತುವೆ ಭಾಗಶಃ ಕುಸಿದಿತ್ತು. ಸೇತುವೆ ಕುಸಿತವಾದ ಹಿನ್ನೆಲೆಯಲ್ಲಿ ಸಂಜೆ ಭೇಟಿ ನೀಡಿದ್ದ ಜಿ. ಪರಮೇಶ್ವರ್ ಪರಿಶೀಲನೆ ನಡೆಸಿದ್ದರು.

ಸೇತುವೆಯ ಒಂದು ಬದಿಯಲ್ಲಿ ನಿಂತು ಅವರು ಹಾನಿಗೀಡಾದ ಸೇತುವೆಯನ್ನು ಪರಿಶೀಲಿಸಿದ್ದರು. ಪರಮೇಶ್ವರ್ ಪರಿಶೀಲಿಸಿ ಮುಂದೆ ಹೋದ ಕೇವಲ 5 ನಿಮಿಷದಲ್ಲಿ ಸೇತುವೆಯ ಇನ್ನೊಂದು ಭಾಗ ಕೂಡ ಕುಸಿತವಾಗಿದೆ. ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...