alex Certify ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ: ಪತ್ನಿ ಮನೆಗೆ ಬಂದ ಪತಿಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ: ಪತ್ನಿ ಮನೆಗೆ ಬಂದ ಪತಿಯಿಂದ ಘೋರ ಕೃತ್ಯ

ಕೇರಳದ ಪತ್ತನಂತಿಟ್ಟದಲ್ಲಿ ಪತ್ನಿಯ ಕೈ ಕತ್ತರಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ.

ಎಝಂಕುಲಂ ಮೂಲದ ಸಂತೋಷ್ ಪತ್ನಿ ವಿದ್ಯಾ ಕಳೆದ 5 ವರ್ಷಗಳಿಂದ ಕಳಂಜೂರಿನ ತಮ್ಮ ಮನೆಯಲ್ಲಿ ವಾಸವಿದ್ದು, ಆತನಿಂದ ಬೇರ್ಪಟ್ಟಿದ್ದರು. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂತೋಷ್ ಸೆಪ್ಟೆಂಬರ್ 17 ರಂದು ರಾತ್ರಿ 9 ಗಂಟೆಗೆ ವಿದ್ಯಾಳ ಮನೆಗೆ ಬಂದು, ಆಕೆಯ ಮೇಲೆ ಹಲ್ಲೆ ನಡೆಸಿ ಮಚ್ಚಿನಿಂದ ಆಕೆಯ ಕೈಗಳನ್ನು ಕತ್ತರಿಸಿದ್ದಾನೆ.

ಅಲ್ಲದೇ, ಆಕೆಯ ತಲೆಗೂದಲು ಕತ್ತರಿಸಿ ಗಾಯಗೊಳಿಸಿದ್ದಾನೆ. ತನ್ನ ಮಗಳನ್ನು ಉಳಿಸಲು ಬಂದ ವಿದ್ಯಾಳ ತಂದೆ ವಿಜಯನ್ ಅವರ ಮೇಲೂ ಹಲ್ಲೆ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ವಿದ್ಯಾ ಹಾಗೂ ಆಕೆಯ ತಂದೆ ಇಬ್ಬರನ್ನೂ ತಿರುವನಂತಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತೋಷ್ ವಿದ್ಯಾಳ ಕೈಯನ್ನು ಮಣಿಕಟ್ಟಿನಿಂದ ಮತ್ತು ಇನ್ನೊಂದು ಕೈಯನ್ನು ಅವಳ ಮೊಣಕೈ ಕೆಳಗಿನಿಂದ ಕತ್ತರಿಸಿದನು. ಶನಿವಾರ ತಡರಾತ್ರಿ ಆರಂಭವಾದ ಶಸ್ತ್ರಚಿಕಿತ್ಸೆ ತಿರುವನಂತಪುರಂ ಆಸ್ಪತ್ರೆಯಲ್ಲಿ ಇನ್ನೂ ಮುಂದುವರಿದಿದೆ.

ಮೊಬೈಲ್ ಫೋನ್ ಲೋಕೇಷನ್ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಸಂತೋಷ್ ಆರು ವರ್ಷಗಳ ಹಿಂದೆ ವಿದ್ಯಾಳನ್ನು ಮದುವೆಯಾಗಿದ್ದ. ಇಬ್ಬರೂ ಒಂದು ವರ್ಷ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಂಪತಿಗಳ ವಿಚ್ಛೇದನ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...