alex Certify ಯಶಸ್ಸು ಸಿಗಬೇಕಾದ್ರೆ ತಪ್ಪದೆ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಶಸ್ಸು ಸಿಗಬೇಕಾದ್ರೆ ತಪ್ಪದೆ ಮಾಡಿ ಈ ಕೆಲಸ

ಖುಷಿ ಹಾಗೂ ಸಮೃದ್ಧಿಗಾಗಿ ಕೆಲವರು ಸಾಕಷ್ಟು ಪರಿಶ್ರಮ ಪಡ್ತಾರೆ. ಎಷ್ಟೇ ಕೆಲಸ ಮಾಡಿದ್ರೂ ಪ್ರತಿಫಲ ಸಿಗೋದಿಲ್ಲ. ನಮ್ಮ ಹಿಂದಿರುವ ಕೆಲವು ದುಷ್ಟ ಶಕ್ತಿಗಳು ನಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತಿರುತ್ತವೆ.

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದಾದಲ್ಲಿ ಕೆಲಸದ ಜೊತೆಗೆ ಕೆಲವೊಂದು ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು. ವಾಸ್ತುದೋಷ ನಿವಾರಣೆಗೆ ಸಹಾಯವಾಗುವ ಕೆಲಸಗಳನ್ನು ಮಾಡುತ್ತ ಬಂದ್ರೆ ಯಶಸ್ಸು ನಮ್ಮನ್ನರಸಿ ಬರುತ್ತದೆ.

ಪ್ರತಿದಿನ ಆಹಾರ ತಯಾರಿಸುವಾಗ ಮೊದಲ ರೊಟ್ಟಿಯನ್ನು ಆಕಳಿಗೆ ತೆಗೆದಿಡಿ. ಹೀಗೆ ಮಾಡುವುದರಿಂದ ಸಂಸಾರಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಹಣ ಸಂಬಂಧಿ ಸಮಸ್ಯೆ ಕಾಡುವುದಿಲ್ಲ.

ಮನೆಯ ತಿಜೋರಿ ಮತ್ತು ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗಬೇಡಿ. ಈ ಪ್ರದೇಶಗಳಿಗೆ ಚಪ್ಪಲಿ ಧರಿಸಿ ಹೋಗುವುದರಿಂದ ಸಂಕಷ್ಟ ಎದುರಾಗುತ್ತದೆ.

ಮನೆಯ ಹಾಲಿನ ಪಾತ್ರೆಯನ್ನು ಸದಾ ಮುಚ್ಚಿಡಿ. ತೆರೆದಿಡುವ ಅನಿವಾರ್ಯತೆ ಎದುರಾದಾಗ ಕವರ್ ನಿಂದಾದ್ರೂ ಮುಚ್ಚಿಡಿ.

ದೇವರಿಗೆ ಹಾಕಿದ ಹೂಗಳು ತುಂಬಾ ಸಮಯ ಅಲ್ಲಿರುವುದು ಒಳಿತಲ್ಲ. ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ದೇವರಿಗೆ ಹಾಕಿದ ಹೂವನ್ನು ರಾತ್ರಿ ತೆಗೆಯಿರಿ.

ಮುಳ್ಳು ಸಸ್ಯಗಳನ್ನು ಮನೆಯಲ್ಲಿಡಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...