alex Certify ಸುಖ ನಿದ್ರೆ ಬರಬೇಕೆಂದ್ರೆ ದಿಂಬಿನ ಕೆಳಗಿಡಿ ಈ ʼವಸ್ತುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ನಿದ್ರೆ ಬರಬೇಕೆಂದ್ರೆ ದಿಂಬಿನ ಕೆಳಗಿಡಿ ಈ ʼವಸ್ತುʼ

सुकून भरी नींद के लिए वास्तु उपाय

ಆರೋಗ್ಯಕ್ಕೆ ಸುಖ ನಿದ್ರೆ ಬಹಳ ಮುಖ್ಯ. ಒತ್ತಡದ ಜೀವನದಲ್ಲಿ ದಿನಪೂರ್ತಿ ಕೆಲಸ ಮಾಡಿ ಹಾಸಿಗೆಗೆ ಬಂದ್ರೆ ಅನೇಕರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಸಿಗೆ ಮೇಲೆ ತಲೆಯಿಡುತ್ತಿದ್ದಂತೆ ಅನೇಕ ಆಲೋಚನೆಗಳು ತಲೆಯಲ್ಲಿ ಓಡುತ್ತಿರುತ್ತವೆ. ಇದ್ರಿಂದ ತಡವಾಗಿ ನಿದ್ರೆ ಬರುವ ಜೊತೆಗೆ ಆಗಾಗ ಎಚ್ಚವಾಗ್ತಿರುತ್ತದೆ. ವಾಸ್ತುಶಾಸ್ತ್ರದಲ್ಲಿ ಸುಖ ನಿದ್ರೆ ಬಗ್ಗೆ ಹೇಳಲಾಗಿದೆ.

ಚಿಂತೆ ಅಥವಾ ಭಯದ ಕಾರಣ ಸರಿಯಾಗಿ ನಿದ್ರೆ ಬರದೆ ಹೋದ್ರೆ ಅಥವಾ ಕೆಟ್ಟ ಕನಸು ಬೀಳ್ತಿದ್ದಂತೆ ರಾತ್ರಿ ಮಲಗುವ ಮೊದಲು ಹನುಮಾನ್ ಚಾಲೀಸ್ ಓದಿ ಮಲಗಿ. ಇದ್ರಿಂದ ನಿಮ್ಮ ಭಯ ದೂರವಾಗಲಿದೆ. ಒಳ್ಳೆ ನಿದ್ರೆ ಬರಲಿದೆ. ಸುಂದರಕಾಂಡ ಓದಿ ಮಲಗಿದ್ರೂ ಒಳ್ಳೆ ನಿದ್ರೆ ಬರುತ್ತದೆ. ಇದನ್ನು ಓದಲು ಸಾಧ್ಯವಾಗದೆ ಹೋದವರು ಸುಂದರಕಾಂಡ ಪುಸ್ತಕವನ್ನು ತಲೆ ಬದಿಯಲ್ಲಿಟ್ಟು ಮಲಗಬಹುದು.

ತಲೆ ಬದಿಯಲ್ಲಿ ಕಬ್ಬಿಣದ ಯಾವುದೇ ವಸ್ತುವನ್ನು ಇಟ್ಟು ಮಲಗಿದ್ರೆ ಒಳ್ಳೆ ನಿದ್ರೆ ಬರಲಿದೆ. ಕಬ್ಬಿಣದ ವಸ್ತುವಿನ ಆಸುಪಾಸು ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಮಕ್ಕಳು ಮಲಗುವ ಜಾಗದಲ್ಲಿ ಕಬ್ಬಿಣದ ವಸ್ತುಗಳನ್ನು ಇಡುವುದು ಒಳ್ಳೆಯದು.

ದೊಡ್ಡ ಸಮಸ್ಯೆಯಿಂದ ಬಳಲುತ್ತಿದ್ದು, ಸರಿಯಾಗಿ ನಿದ್ರೆ ಬರ್ತಿಲ್ಲ ಎಂದಾದ್ರೆ ತಲೆ ಕೆಳಗೆ ಮೂಲಂಗಿ ಇಟ್ಟು ಮಲಗಿ. ಇದ್ರಿಂದ ನಿಮ್ಮೆಲ್ಲ ಸಮಸ್ಯೆ ದೂರವಾಗಿ, ಸರಿಯಾಗಿ ನಿದ್ರೆ ಬರುತ್ತದೆ.

ದಿಂಬಿನ ಕೆಳಗೆ ಭಗವಂತನಿಗೆ ಅರ್ಪಿಸಿರುವ ಹೂವನ್ನಿಟ್ಟು ಮಲಗಿದ್ರೆ ಸುಖ ನಿದ್ರೆ ಬರುತ್ತದೆ. ಮನಸ್ಸು ಶಾಂತವಾಗಿ ನಿದ್ರೆಗೆ ಜಾರುತ್ತದೆ. ಸದಾ ಸುಖ-ಶಾಂತಿ ನೆಲೆಸಿರುತ್ತದೆ.

ರಾತ್ರಿ ಮಲಗುವ ವೇಳೆ ತಂದೆ-ತಾಯಿಯನ್ನು ನೆನೆದು ಮಲಗಬೇಕು. ಹಾಗೆ ಕುಲ ದೇವರನ್ನು ನೆನೆದು ಮಲಗಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...