alex Certify ʼದೀಪಾವಳಿʼಯಂದು ಯಾವ ಘಟನೆ ನಡೆದ್ರೆ ಮಂಗಳಕರ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದೀಪಾವಳಿʼಯಂದು ಯಾವ ಘಟನೆ ನಡೆದ್ರೆ ಮಂಗಳಕರ…?

ದೀಪಾವಳಿಯ ಸಂಭ್ರಮ ಶುರುವಾಗ್ತಿದೆ. ಮನೆ- ಮನೆಗಳಲ್ಲಿ ತಾಯಿ ಲಕ್ಷ್ಮಿ ಪೂಜೆ ನಡೆಯುತ್ತದೆ. ಆರ್ಥಿಕ ವೃದ್ಧಿ ಜೊತೆಗೆ ಆರೋಗ್ಯ, ಆಯಸ್ಸು ಭಾಗ್ಯ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ.

ಈ ದೀಪಾವಳಿಯಲ್ಲಿ ತಾಯಿ ಪೂಜೆ ಹೇಗೆ ಮಾಡಬೇಕು, ಮನೆಯ ಮುಖ್ಯ ದ್ವಾರವನ್ನು ಹೇಗೆಲ್ಲ ಸಿಂಗಾರ ಮಾಡಬೇಕು, ಯಾವ ಸಿಹಿ ಸಿದ್ಧಪಡಿಸಬೇಕೆನ್ನುವ ಬಗ್ಗೆ ವಿವರವಾಗಿ ಹೇಳಿದ್ದೇವೆ. ಇನ್ನು ಈ ದೀಪಾವಳಿಯ ಸಂದರ್ಭದಲ್ಲಿ ಯಾವೆಲ್ಲ ಪ್ರಾಣಿ, ವಸ್ತುಗಳು ನಮ್ಮ ಕಣ್ಣಿಗೆ ಬಿದ್ರೆ ಶುಭ ಎಂಬುದನ್ನು ಹೇಳ್ತೇವೆ ಕೇಳಿ.

ದೀಪಾವಳಿಯ ದಿನದಂದು ಕನ್ಯೆ ನಿಮಗೆ ಆಹಾರ ಅಥವಾ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ರೆ ಅದು ಬಹಳ ಶುಭಕರ.

ಹಾಗೆ ಲಕ್ಷ್ಮಿಯ ವಾಹನ ಗೂಬೆ ನಿಮ್ಮ ಕಣ್ಣಿಗೆ ಬಿದ್ರೆ ಅದರಷ್ಟು ಅದೃಷ್ಟ ಮತ್ಯಾವುದೂ ಇಲ್ಲ.

ದೀಪಾವಳಿಯ ದಿನದಂದು ಬೆಕ್ಕು ಮನೆಯೊಳಗೆ ಬರುವುದು ಮಂಗಳಕರ.

ಮಂಗಳಮುಖಿಯರು ಮನೆಗೆ ಬರುವುದು, ನೀವು ಕೊಟ್ಟ ಹಣದಲ್ಲಿ ಒಂದು ರೂಪಾಯಿಯನ್ನು ನಿಮಗೆ ವಾಪಸ್ ನೀಡುವುದು, ಇಲ್ಲ ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಅದು ಶುಭ ಶಕುನ.

ದೀಪಾವಳಿಯ ರಾತ್ರಿ ಗೋಡೆ ಮೇಲೆ ಹಲ್ಲಿ ಕಾಣಿಸಿಕೊಂಡರೆ ಶುಭ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...