alex Certify ಬೆಳಗ್ಗೆ ಏಳುತ್ತಿದ್ದಂತೆ ಈ ಮಂತ್ರ ಜಪಿಸಿದ್ರೆ ದೂರವಾಗುತ್ತೆ ಗ್ರಹ ದೋಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ಏಳುತ್ತಿದ್ದಂತೆ ಈ ಮಂತ್ರ ಜಪಿಸಿದ್ರೆ ದೂರವಾಗುತ್ತೆ ಗ್ರಹ ದೋಷ

ಜಾತಕದಲ್ಲಿ ಒಂಭತ್ತು ಗ್ರಹಗಳಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವಾನುದೇವತೆಗಳ ಕೃಪೆ ಸಿಗೋದು ಕಷ್ಟ. ಇದ್ರಿಂದ ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗುತ್ತದೆ. ಅದೃಷ್ಟ ಒಲಿಯುವುದಿಲ್ಲ. ಗ್ರಹ ದೋಷ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಬಹುತೇಕ ಪೂಜೆ-ಪುನಸ್ಕಾರಗಳನ್ನು ಸ್ನಾನ ಮಾಡಿಯೇ ಮಾಡಬೇಕು. ಆದ್ರೆ ಕೆಲವೊಂದು ಶುಭ ಕೆಲಸಗಳನ್ನು ಸ್ನಾನ ಮಾಡದೆ ಮಾಡಬೇಕು.

ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹಸ್ತವನ್ನು ನೋಡ್ತಾ ಕರಾಗ್ರೆ ವಸತೇ ಲಕ್ಷ್ಮಿ: ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೆ ಗೌರಿ: ಪ್ರಭಾತೆ ಕರ ದರ್ಶನಂ ಎಂಬ ಮಂತ್ರವನ್ನು ಪಠಿಸಬೇಕು. ಇದು ಸ್ನಾನ ಮಾಡದೆ ಮಾಡುವ ಕೆಲಸ.

ಇದ್ರ ಜೊತೆಗೆ ಬ್ರಹ್ಮ ಮುರಾರಿ ತ್ರಿಪುರಾಂತಕಾರಿ : ಭಾನು ಶಶಿ ಭೂಮಿಸುತೆ ಬುಧಶ್ಯ: ಗುರುಶ್ಯ ಶುಕ್ರ : ಶನಿ ರಾಹು ಕೇತುಹ: ಕುರ್ವೇಂತು ಸರ್ವೆ ಮಮಸುಪ್ರಭಾತಂ: ಮಂತ್ರವನ್ನು ಪಠಿಸಬೇಕು. ಈ ಮಂತ್ರ ಪಠಣೆಯಿಂದ ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಶುಭ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಎಲ್ಲರೂ ಪ್ರಸನ್ನರಾಗ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...