alex Certify ಈ ಸಮಯದಲ್ಲಿ ʼಶಾರೀರಿಕ ಸಂಬಂಧʼ ಬೆಳೆಸಿದ್ರೆ ಮನುಷ್ಯನಾಗ್ತಾನೆ ರೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಯದಲ್ಲಿ ʼಶಾರೀರಿಕ ಸಂಬಂಧʼ ಬೆಳೆಸಿದ್ರೆ ಮನುಷ್ಯನಾಗ್ತಾನೆ ರೋಗಿ

ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದೆ ಆದ ನಿಯಮಗಳಿವೆ. ಪದ್ಧತಿಯಂತೆ ನಡೆದುಕೊಂಡಲ್ಲಿ ಆತನಿಗೆ ಸುಖ ದೊರಕುವ ಜೊತೆಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಈ ಜನ್ಮದಲ್ಲಿ ಮಾಡಿದ ಕಾರ್ಯಗಳ ಫಲವನ್ನು ಮುಂದಿನ ಜನ್ಮದಲ್ಲಿ ಮನುಷ್ಯ ಅನುಭವಿಸುತ್ತಾನೆಂದು ಶಾಸ್ತ್ರ ಹೇಳುತ್ತದೆ.

ಶಾರೀರಿಕ ಸಂಬಂಧ ಬೆಳೆಸಲೂ ಒಂದು ಸಮಯವನ್ನು ನಿಗದಿ ಮಾಡಲಾಗಿದೆ. ಯಾವ ಸಮಯದಲ್ಲಾದ್ರೂ ಸ್ತ್ರೀ-ಪುರುಷ ಒಂದಾಗುವುದು ಪುರಾಣದ ಪ್ರಕಾರ ಒಳ್ಳೆಯದಲ್ಲ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಮನುಷ್ಯ 7 ಜನ್ಮಗಳಲ್ಲೂ ರೋಗದಿಂದ ಬಳಲ್ತಾನೆ. ಜೊತೆಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

ಅಮವಾಸ್ಯೆಯಂದು ಸ್ತ್ರೀ-ಪುರುಷರು ಒಂದಾಗುವುದು ಒಳಿತಲ್ಲ. ಅಂದು ಒಂದಾದ್ರೆ ಮುಂದಿನ ಜನ್ಮದಲ್ಲಿ ಪ್ರಾಣಿ, ಕೀಟವಾಗಿ ಜನಿಸ್ತಾರೆ. ಜೊತೆಗೆ ನರಕ ಅನುಭವಿಸಬೇಕಾಗುತ್ತದೆ.

ಹುಣ್ಣಿಮೆ, ಚತುರ್ದಶಿ ಹಾಗೂ ಅಷ್ಠಮಿಯಂದು ಶಾರೀರಿಕ ಸಂಬಂಧ ಬೆಳೆಸುವುದು ಅಶುಭ. ನರಕ ಅನುಭವಿಸಬೇಕಾಗುತ್ತದೆ.

ಗ್ರಹಣದ ವೇಳೆಯೂ ಸ್ತ್ರೀ-ಪುರುಷರು ದೂರವಿರಬೇಕು.

ಜನ್ಮಾಷ್ಟಮಿ, ರಾಮ ನವಮಿ, ಹೋಳಿ, ಶಿವರಾತ್ರಿ, ನವರಾತ್ರಿ ಹೀಗೆ ಹಬ್ಬದ ದಿನಗಳಲ್ಲಿಯೂ ಶಾರೀರಿಕ ಸಂಬಂಧ ಒಳ್ಳೆಯದಲ್ಲ.

ಜನ್ಮದಿನ ಹಾಗೂ ತಂದೆ- ತಾಯಿಯ ಪುಣ್ಯತಿಥಿಯಂದು ಈ ವಿಷಯದಲ್ಲಿ ಎಚ್ಚರವಾಗಿರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...