alex Certify ಇಲ್ಲಿದೆ ಶನಿವಾರದ ರಾಶಿ ಭವಿಷ್ಯ: ಯಾರಿಗೆ ಕಾದಿದೆ ಶುಭ ಫಲ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಶನಿವಾರದ ರಾಶಿ ಭವಿಷ್ಯ: ಯಾರಿಗೆ ಕಾದಿದೆ ಶುಭ ಫಲ….?

ಮೇಷ : ಕುಟುಂಬದಲ್ಲಿನ ಒಗ್ಗಟ್ಟಿನಿಂದ ಎಂತಹ ಜಟಿಲ ಸಮಸ್ಯೆಯೂ ನಿಮ್ಮ ವಿಚಲಿತರನ್ನಾಗಿಸದು. ಉದ್ಯಮ ಹಾಗೂ ರಾಜಕಾರಣದಲ್ಲಿ ಉತ್ತಮ ಅವಕಾಶ ಕಾದಿದೆ. ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದವರಿಗೆ ಇಂದು ಸೂಕ್ತ ಸಮಯ.

ಪೋಷಕರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ : ಪಿತ್ರಾರ್ಜಿತ ಆಸ್ತಿಯಲ್ಲಿನ ವಿವಾದ ಶಾಂತಿ ರೂಪಕ್ಕೆ ಬರಲಿದೆ. ಉದ್ಯೋಗಾಕಾಂಕ್ಷಿಗಳಿಗೆ  ಉತ್ತಮ ಅವಕಾಶ ಕಾದಿದೆ. ಮದುವೆಗೆ ಕಾಯುತ್ತಿದ್ದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವ್ಯಾಪಾರಸ್ಥರಿಗೆ ಇಂದು ಒಳ್ಳೆಯ ದಿನವಲ್ಲ. ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ.

ಮಿಥುನ : ವೈಯಕ್ತಿಕ ಬದುಕು ಹಸನಾಗಲಿದೆ. ನಿಮ್ಮ ಸಾಮರ್ಥ್ಯದಿಂದ ಕಚೇರಿಯಲ್ಲಿ ಒಳ್ಳೆಯ ಸ್ಥಾನ ಮಾನ ಪಡೆಯಲಿದ್ದೀರಿ. ಸಂಬಳ ಏರಿಕೆಯ ಶುಭ ಸುದ್ದಿಯೂ ಕಿವಿಗೆ ಬೀಳಬಹುದು. ಸಂಗಾತಿಯಿಂದ ಉತ್ತಮ ಉಡುಗೊರೆ ನಿರೀಕ್ಷಿಸಬಹುದು. ಅನಗತ್ಯ ಯಾರೊಂದಿಗೂ ಮಾತಿಗೆ ಇಳಿಯಬೇಡಿ.

ಕಟಕ : ಉದ್ಯಮಿಗಳಿಗೆ ಲಾಭ ಕಾದಿದೆ. ಕಚೇರಿ ಕೆಲಸದಲ್ಲಿ ಇರುವವರಿಗೆ ಕೊಂಚ ಕಿರಿಕಿರಿ ಎದುರಾಗಬಹುದು. ಪೋಷಕರ ಜೊತೆ ಅನಗತ್ಯ ವಾದ ಮಾಡಬೇಡಿ. ವೈವಾಹಿಕ ಜೀವನದಲ್ಲಿ ಕೊಂಚ ಸಮಸ್ಯೆ ಎದುರಾಗಬಹುದು. ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದೀರಿ.

ಸಿಂಹ : ಹಣಕಾಸಿನ ಲಾಭ ನಿಮ್ಮದಾಗಲಿದೆ. ನಿಮ್ಮ ಪರಿಶ್ರಮಕ್ಕೆ ಫಲ ಸಿಗುವ ಸಮಯ ಸನ್ನಿಹಿತವಾಗ್ತಿದೆ. ಸಂಸಾರದಲ್ಲಿ ಹಲವು ದಿನಗಳಿಂದ ಇದ್ದ ಕಿರಿಕಿರಿ ದೂರಾಗಲಿದೆ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅವಕಾಶ ಕೂಡಿಬರಲಿದೆ. ಕುಲದೇವತೆಯನ್ನ ಆರಾಧಿಸಿ.

ಕನ್ಯಾ : ಮಕ್ಕಳಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಹಿರಿಯ ಅಧಿಕಾರಿಗಳಿಗೆ ಖುಷಿ ತಾರದೇ ಇರಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿ ಇರಲಿದೆ. ವಾತಾವರಣ ಸರಿ ಇಲ್ಲದ ಕಾರಣ ಹೊರಗಡೆಯ ಆಹಾರ ಸೇವಿಸಬೇಡಿ. ಸಂಗಾತಿ ಜೊತೆ ಕಿರಿಕಿರಿ ಉಂಟಾಗಬಹುದು.

ತುಲಾ : ಮಾತಿನ ಭರದಲ್ಲಿ ಸಂಬಂಧಗಳನ್ನ ಕಳೆದುಕೊಳ್ಳುವ ಪ್ರಸಂಗ ಎದುರಾಗಬಹುದು. ಸ್ವಂತ ಮನೆ ಖರೀದಿ ಮಾಡಬೇಕೆಂದುಕೊಂಡವರಿಗೆ ಶುಭ ಸುದ್ದಿ ಕಾದಿದೆ. ಸಂಗಾತಿ ಜೊತೆ ಸಣ್ಣ ಪುಟ್ಟ ಅಸಮಾಧಾನ ಮುಂದುವರಿಯಲಿದೆ. ದೂರ ಪ್ರಯಾಣ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ : ಉದ್ಯೋಗಿಗಳಿಗೆ ಬಡ್ತಿ ಇಲ್ಲವೇ ಸಂಬಳ ಏರಿಕೆಯ ಶುಭ ಸುದ್ದಿ ಸಿಗಲಿದೆ. ಉದ್ಯಮದಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿರುವವರಿಗೆ ಇಂದು ಸುದಿನ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಸಂಗಾತಿಯಿಂದಲೂ ನೆಮ್ಮದಿ ಇದೆ. ಪ್ರಯತ್ನ ಮುಂದುವರಿಸಿ. ಫಲ ಖಂಡಿತ ಸಿಗಲಿದೆ.

ಧನಸ್ಸು : ಕಚೇರಿಯಲ್ಲಿ ನೆಮ್ಮದಿ ಇರೋದಿಲ್ಲ. ಉದ್ಯೋಗಾಕಾಂಕ್ಷಿಗಳು ಇಂದು ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಆರ್ಥಿಕವಾಗಿ ಮಿಶ್ರ ಫಲ ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಇಂದಿನ ದಿನ ಶುಭಕರವಾಗಿಲ್ಲ. ಪೋಷಕರೊಂದಿಗೆ ಉತ್ತಮ ಸಂಬಂಧ ಹೊಂದಲಿದ್ದೀರಿ. ಸಂಗಾತಿ ಜೊತೆ ಇರುವ ಅಸಮಾಧಾನಗಳನ್ನ ಮರೆಯುವ ಪ್ರಯತ್ನ ಮಾಡಿ.

ಮಕರ : ನಿರ್ಧಾರಗಳನ್ನ ತೆಗೆದುಕೊಳ್ಳುವ ಮುನ್ನ ಹಿರಿಯರ ಮಾತಿಗೂ ಗೌರವ ನೀಡಿ. ಸಹೋದ್ಯೋಗಿ ನಿಮ್ಮವನೆಂದು ಕೆಲಸದ ಸೀಕ್ರೆಟ್​ಗಳನ್ನ ಬಿಟ್ಟುಕೊಡಬೇಡಿ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಮುನ್ನಡೆ ಕಾದಿದೆ. ಸಂತಾನ ಭಾಗ್ಯವಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ : ಮಿತ್ರರನ್ನ ಹತ್ತಿರದಲ್ಲಿ ಇಡು. ಶತ್ರುವನ್ನ ಬಗಲಲ್ಲೇ ಇಡು ಎಂಬ ಮಾತನ್ನ ನೆನಪಿಟ್ಟುಕೊಳ್ಳಿ. ನಿಮ್ಮ ಸಣ್ಣ ನಿರ್ಲಕ್ಷ್ಯವೂ ಶತ್ರುವಿಗೆ ನಿಮ್ಮ ವಿರುದ್ಧ ಹಗೆ ಸಾಧಿಸಲು ನೀಡುವ ದೊಡ್ಡ ಅವಕಾಶವಾಗಿ ಮಾರ್ಪಾಡಾಗಬಹುದು. ವೈಯಕ್ತಿಕ ಜೀವನದ ಮಾಹಿತಿಯನ್ನ ಹೊರಗಡೆ ಬಿಟ್ಟು ಕೊಡಬೇಡಿ. ಉದ್ಯಮಿಗಳಿಗೆ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು.

ಮೀನ : ನೀವು ವ್ಯಾಪಾರಿಯಾಗಿದ್ದರೆ ಗ್ರಾಹಕರೊಂದಿಗೆ ಸಂಬಂಧ ಸರಿಯಾಗಿ ಇಟ್ಟುಕೊಳ್ಳಲು ಇನ್ನಷ್ಟು ಪ್ರಯತ್ನ ಮಾಡಿ. ವೈಯಕ್ತಿಕ ಹಾಗೂ ವೃತ್ತಿ ಜೀವನದ ನಡುವೆ ಹೊಂದಾಣಿಕೆ ಮಾಡಿಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿ ಇರಲಿದೆ. ಮಕ್ಕಳ ಚಟುವಟಿಕೆಗಳ ಮೇಲೆ ಕೊಂಚ ನಿಗಾ ಇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...