ಕಾರ್ತಿಕ ಮಾಸದಲ್ಲಿ ಸೂರ್ಯ ದುರ್ಬಲನಾಗ್ತಾನೆ. ಹಾಗಾಗಿ ಈ ದಿನದಲ್ಲಿ ಶಕ್ತಿ ಹಾಗೂ ಬೆಳಕು ಎರಡೂ ದುರ್ಬಲವಾಗುತ್ತದೆ. ಈ ಸಮಯದಲ್ಲಿ ದೀಪ ಬೆಳಗಿ ಈಶ್ವರ, ಶಕ್ತಿ ಹಾಗೂ ಬೆಳಕಿನ ನಡುವೆ ಸಂಬಂಧ ಸ್ಥಾಪನೆ ಮಾಡ್ತೇವೆ. ದೀಪ ಬೆಳಗುವುದ್ರಿಂದ ಈಶ್ವರನ ಕೃಪೆ, ಶಕ್ತಿ ಹಾಗೂ ಸಮೃದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.
ಕಾರ್ತಿಕ ಮಾಸದಲ್ಲಿ ಬೆಳಗಿದ ದೀಪ ಎಂದೂ ವಿಫಲವಾಗುವುದಿಲ್ಲ. ಈ ತಿಂಗಳಲ್ಲಿ ಬೇರೆ ಬೇರೆ ಪ್ರಾರ್ಥನೆಗಳಿಗೆ ಬೇರೆ ಬೇರೆ ದೀಪಗಳನ್ನು ಬೆಳಗಲಾಗುತ್ತದೆ. ದೀಪ ಬೆಳಗುವ ವೇಳೆ ತಲೆಯನ್ನು ತಗ್ಗಿಸಬೇಡಿ. ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೀಪ ಬೆಳಗಿ.
BREAKING: 11 ನಾಗರಿಕರ ಹತ್ಯೆ ಹಿನ್ನಲೆ, ಜಮ್ಮು ಕಾಶ್ಮೀರದಲ್ಲಿ ಅಮಿತ್ ಶಾ ಮಹತ್ವದ ಸಭೆ
ಎಂದೂ ಮನೆಯಲ್ಲಿ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಬೇಡಿ. ಎಳ್ಳಿನ ಎಣ್ಣೆ ಅಥವಾ ಆಕಳ ತುಪ್ಪದಲ್ಲಿ ದೀಪ ಹಚ್ಚಿ.
ದೀಪವನ್ನು ಬಾಯಿ ಮೂಲಕ ಆರಿಸಬಾರದು. ಕೈನಲ್ಲಿ ಗಾಳಿ ಬೀಸಿ ಅಥವಾ ಬಟ್ಟೆಯ ಮೂಲಕ ಆರಿಸಿ.
ಕಾರ್ತಿಕ ಮಾಸದಲ್ಲಿ ವಾತಾವರಣದಲ್ಲಿಯೂ ಸಾಕಷ್ಟು ಬದಲಾವಣೆಯಾಗುತ್ತದೆ. ಚಳಿಗಾಲ ಶುರುವಾಗುವುದ್ರಿಂದ ಆಹಾರದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಮಸಾಲೆ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.