alex Certify ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ವಾರ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ವಾರ್ತೆ

ಮೇಷ : ಕುಲದೇವತೆಯ ಅನುಗ್ರಹದಿಂದ ನಿಮಗೆ ಬಂದ ಸಂಕಷ್ಟಗಳು ದೂರಾಗಲಿದೆ. ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಮಾರ್ಗಸೂಚನೆಯಂತೆ ಮನೆಯ ಶುಭ ಕಾರ್ಯಗಳು ನೆರವೇರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ.

ವೃಷಭ : ನಿಮ್ಮ ನಾಯಕತ್ವದ ಗುಣದ ಬಗ್ಗೆ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಾ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನ ಕಾಡಲಿದೆ. ಹೀಗಾಗಿ ಆದಷ್ಟು ವಿಶ್ರಾಂತಿ ಮಾಡಿ. ಕೃಷಿಕರಿಗೆ ಲಾಭ ಕಾದಿದೆ. ಸಂಗಾತಿಯಿಂದ ನೆಮ್ಮದಿ ಇದೆ.

ಮಿಥುನ : ಎಲ್ಲಾ ವಿಚಾರದಲ್ಲೂ ಪೋಷಕರ ಸಲಹೆಯನ್ನ ಕೇಳೋದನ್ನ ಮರೆಯಬೇಡಿ. ಕೋರ್ಟ್- ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ. ಆರ್ಥಿಕ ಜೀವನದ ಸುಧಾರಿಸಲಿದೆ. ದಾಂಪತ್ಯ ಜೀವನದಲ್ಲಿ ಕೊಂಚ ಕಿರಿಕಿರಿ ಉಂಟಾಗಬಹುದು.

ಕಟಕ : ನಿಮ್ಮ ಮುಂದಿರುವ ಎಲ್ಲಾ ಸಂಕಷ್ಟಗಳು ಶೀಘ್ರದಲ್ಲೇ ಮಂಜಿನಂತೆ ಕರಗಲಿದೆ. ಮನೆಯಲ್ಲಿ ಕಂಕಣ ಭಾಗ್ಯದ ಸುದ್ದಿ ಕೇಳಿಬರಲಿದೆ. ನಿಮ್ಮ ಪ್ರತಿಭೆಯಿಂದ ಕಚೇರಿಯಲ್ಲಿ ಎಲ್ಲರ ಮೆಚ್ಚುಗೆ ಪಡೆಯುತ್ತೀರಾ.

ಸಿಂಹ : ಅನಿರೀಕ್ಷಿತ ಮೂಲದಿಂದ ಹಣವು ಹರಿದು ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರ – ವ್ಯವಹಾರವು ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದರೂ ಸಹ ಕ್ರಮೇಣವಾಗಿ ಲಾಭ ಪಡೆಯುತ್ತೀರಾ. ಮನೆಯ ಪೀಠೋಪಕರಣ ಖರೀದಿಗಾಗಿ ಹಣ ವ್ಯಯವಾಗಲಿದೆ.

ಕನ್ಯಾ : ಮಕ್ಕಳ ಒತ್ತಾಯಕ್ಕೆ ಮಣಿದು ದುಬಾರಿ ಬೆಲೆಯ ವಸ್ತುವನ್ನ ಖರೀದಿ ಮಾಡಲಿದ್ದೀರಿ. ಆತ್ಮೀಯರನ್ನ ಭೇಟಿ ಮಾಡುವ ಅವಕಾಶ ಕೂಡಿ ಬರಲಿದೆ. ಸಹಾಯಕ್ಕೆಂದು ಬೇಡಿ ಬಂದವರಿಗೆ ನೆರವಾಗುವ ನಿಮ್ಮ ಬುದ್ಧಿ ಸಾರ್ವಜನಿಕ ವಲಯದಲ್ಲಿ ನಿಮ್ಮ ಗೌರವ ಹೆಚ್ಚಲು ಕಾರಣವಾಗಲಿದೆ.

ತುಲಾ : ಈ ಹಿಂದೆ ನಿಮ್ಮಿಂದ ಸಹಾಯ ಪಡೆದವರು ಇಂದು ನಿಮಗೆ ನೆರವಾಗಲಿದ್ದಾರೆ. ಆತ್ಮೀಯರ ನೋವಿನ ಕತೆ ಕೇಳಿ ನಿಮ್ಮ ಈ ದಿನವು ಕೊಂಚ ಬೇಸರದಿಂದಲೇ ಸಾಗಲಿದೆ. ಅಡಿಕೆ ವ್ಯಾಪಾರಸ್ಥರಿಗೆ ಇಂದು ಲಾಭ ಕಾದಿದೆ. ಆರ್ಥಿಕ ಲಾಭ ಸಿಗೋದರ ಜೊತೆಯಲ್ಲಿ ಖರ್ಚು ವೆಚ್ಚು ಸಹ ಏರಿಕೆಯಾಗಲಿದೆ.

ವೃಶ್ಚಿಕ : ಯಶಸ್ಸು ನಿಮ್ಮದಾಗಬೇಕು ಅಂದರೆ ಇದು ಕೈಯಲ್ಲಿರುವ ಹಣ ಖಾಲಿಯಾಗೋದು ಅನಿವಾರ್ಯವಾಗಲಿದೆ. ಸಂಗಾತಿಯೊಂದಿಗಿನ ವಾದದಲ್ಲಿ ನಿಮಗೆ ಸೋಲು ನಿಶ್ಚಿತ. ಕಚೇರಿಯಲ್ಲಿ ನಿಮ್ಮ ಪರವಾಗಿ ಪರಿಸ್ಥಿತಿಗಳು ಎದುರಾಗಲಿದೆ.

ಧನು : ವ್ಯವಹಾರದಲ್ಲಿ ಹಿಂದೆ ಮುಂದೆ ಯೋಚನೆ ಮಾಡದೇ ಹೂಡಿಕೆ ಮಾಡಿದ ಪರಿಣಾಮವಾಗಿ ನಷ್ಟ ಅನುಭವಿಸುತ್ತೀರಾ. ಹೀಗಾಗಿ ಮನೆಯಲ್ಲಿ ಆತಂಕ ಹೆಚ್ಚಾಗಲಿದೆ. ಸಂಗಾತಿ ನೀಡುವ ಸಲಹೆಯನ್ನ ಸೂಕ್ತವಾಗಿ ಕೇಳಿ ಆಗಿರುವ ನಷ್ಟ ಪರಿಹಾರಕ್ಕೆ ದಾರಿ ಕಾಣಲಿದೆ. ಮಕ್ಕಳಿಂದ ಶುಭ ವಾರ್ತೆ ಕೇಳುತ್ತೀರಾ.

ಮಕರ: ಈಗಾಗಲೇ ಮಾಡಿರುವ ಸಾಲ ಮೈಮೇಲೆ ಇರುವಾಗ ಮತ್ತೊಂದು ಕಡೆ ಸಾಲ ಮಾಡುವ ಹುಂಬ ಧೈರ್ಯ ಬೇಡವೇ ಬೇಡ. ಶನಿಯ ಕಾಟ ನಿಮ್ಮನ್ನ ಬಿಟ್ಟು ಬಿಡದೇ ಕಾಡುತ್ತಿದೆ. ಹೀಗಾಗಿ ಹೊಸ ಹೂಡಿಕೆಯ ಕಾರ್ಯಗಳು ಬೇಡವೇ ಬೇಡ.

ಕುಂಭ : ನೀವು ಎಷ್ಟೇ ಪ್ರಯತ್ನ ಪಟ್ಟರೂ ಸಹ ಹಣ ಉಳಿತಾಯ ಮಾಡೋದು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಬೇರೆಯವರ ಜೀವನದಂತೆ ಅನುಕೂಲವಿಲ್ಲ ಎಂಬ ಬೇಸರ ಬೇಡ. ಕ್ರಮೇಣವಾಗಿ ಎಲ್ಲವೂ ಒಳಿತಾಗಲಿದೆ.

ಮೀನ : ಭಗವಂತ ನಿಮಗೆ ನೀಡಿರುವ ವ್ಯಕ್ತಿತ್ವವೇ ನಿಮ್ಮನ್ನು ಕಾಪಾಡಲಿದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಿ. ಕುಲದೇವತೆಯನ್ನು ಆರಾಧನೆ ಮಾಡಿ. ಗುರುವಿನ ಕೃಪೆಯಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...