alex Certify ಕಾಡುವ ಸಮಸ್ಯೆಗಳಿಗೆ ಇಲ್ಲಿದೆ ʼಪರಿಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಸಮಸ್ಯೆಗಳಿಗೆ ಇಲ್ಲಿದೆ ʼಪರಿಹಾರʼ

ಸಮಸ್ಯೆಗಳಿಲ್ಲದ ಮನುಷ್ಯರಿಲ್ಲ. ಎಲ್ಲರ ಜೀವನದಲ್ಲಿ ಒಂದು ಒಂದು ಸಮಸ್ಯೆ ಕಾಡುತ್ತಿರುತ್ತದೆ. ಸಮಸ್ಯೆ ಎದುರಾದಾಗ ಮನುಷ್ಯ ಕುಗ್ಗುವುದು ಸಹಜ. ಆದರೆ ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು.

ಕೆಲವೊಮ್ಮೆ ಏನು ಮಾಡುವುದಕ್ಕೆ ತೋಚದೇ ಇದ್ದಾಗ ಅಂತಹವರು ಈ ಕ್ರಮ ಅನುಸರಿಸಿದರೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಮೊದಲಿಗೆ ಒಂದು ಶುಭ್ರವಾದ ಬಿಳಿ ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಿ. ಅದನ್ನು ಅರಿಶಿನವಿರುವ ಬಟ್ಟಲಿನಲ್ಲಿ ಅದ್ದಿ. ಈ ಬಟ್ಟೆಯನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ. ಆಮೇಲೆ ಈ ಬಟ್ಟೆಯ ಮೇಲೆ 2 ನಾಣ್ಯ ಹಾಕಿ. ಕಷ್ಟಗಳೆಲ್ಲಾ ಕರಗಿ ಹೋಗಲಿ ಎಂದು ಶುದ್ಧವಾದ ಮನಸ್ಸಿನಿಂದ ಬೇಡಿಕೊಳ್ಳಿ. ನಾಲ್ಕು ವಾರ ಕಳೆದ ನಂತರ ಈ ಬಟ್ಟೆಯನ್ನು ಹರಿವ ನೀರಿಗೆ ಹಾಕಿ ಇದರಿಂದ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ.

ಒಂದು ಸಣ್ಣ ಪಾತ್ರೆ ತುಂಬ ನೀರು ತುಂಬಿಸಿ ಸ್ವಲ್ಪ ಚಂದನವನ್ನು ಅದರಲ್ಲಿ ಸೇರಿಸಿ. ಯಾವ ವ್ಯಕ್ತಿ ಸಮಸ್ಯೆಯಿಂದ ಬಳಲುತ್ತಿದ್ದಾನೋ ಆ ವ್ಯಕ್ತಿ ಮಲಗುವ ಮಂಚದ ಕೆಳಗೆ ಈ ಪಾತ್ರೆಯನ್ನು ಇರಿಸಿ. ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ತುಳಸಿ ಗಿಡ ಅಥವಾ ಯಾವುದಾದರೂ ಹೂವಿನ ಗಿಡಕ್ಕೆ ಹಾಕಿ. ಇದರಿಂದ ಕೂಡ ಕಷ್ಟ ನಿವಾರಣೆಯಾಗಿ ಸುಖ ಶಾಂತಿ ದೊರಕುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...